Advertisement

ನಿಮ್ಮ ಗ್ರಹಬಲ: ಈ ರಾಶಿಯವರಿಗೆ ವ್ಯಾಪಾರ ವ್ಯವಹಾರ ರಂಗದಲ್ಲಿ ಅದೃಷ್ಟದ ಆಸರೆ ಸದಾ ಇರುವುದು

07:48 AM Mar 07, 2021 | Team Udayavani |

07-03-2021

Advertisement

ಮೇಷ: ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಪರಿಹರಿಸಿಕೊಳ್ಳುವ ಆತ್ಮವಿಶ್ವಾಸ, ಪ್ರಯತ್ನಶೀಲತೆಯ ಶಕ್ತಿಯನ್ನು ನೀವು ಪಡೆಯಲಿದ್ದೀರಿ. ಹಾಗೇ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳ ನಿವಾರಣೆಯಾಗಲಿದೆ.

ವೃಷಭ: ಅನ್ಯೋನ್ಯತೆ, ಸಹಕಾರ, ಸುಖ, ಸಂತೋಷ, ಸಮಾಧಾನಗಳು ಬೆಳೆಯಲಿವೆ. ವ್ಯವಹಾರ, ವ್ಯಾಪಾರ ವ್ಯವಹಾರ ರಂಗದಲ್ಲಿ ಅದೃಷ್ಟದ ಆಸರೆ ಸದಾ ಇರುವುದು. ಬಂದ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವಿರಿ.

ಮಿಥುನ: ಕಾರ್ಯರಂಗದಲ್ಲಿ ಹಾಗೇ ಜೀವನ ಕ್ಷೇತ್ರದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಜೀವನದಲ್ಲಿ ಹೊಂದಿಕೊಳ್ಳುವುದು ಅಗತ್ಯವಿದೆ. ಹಾಗೇ ಯಾವುದರಲ್ಲೂ ಆತುರತೆ ತುಂಬಾ ಖಚಿತ ನಿರ್ಧಾರವನ್ನು ಕೈಗೊಳ್ಳದಿದ್ದರೆ ಉತ್ತಮ.

ಕರ್ಕ: ಹಿತಶತ್ರುಗಳು ನಿಮ್ಮನ್ನು ಗಮನಿಸುವರು. ಜಾಗ್ರತೆ ಮಾಡಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಕೊಂಚ ಹಿನ್ನಡೆ ಸ್ಥಿತಿಯಲ್ಲಿ ಆಗಾಗ ಆರ್ಥಿಕವಾಗಿ ಸಮಸ್ಯೆಗಳು ತೋರಿಬಂದರೂ ಅನಿರೀಕ್ಷಿತ ಧನಾಗಮನ ಕಂಡು ಬಂದೀತು.

Advertisement

ಸಿಂಹ: ವ್ಯಾಪಾರ, ವ್ಯವಹಾರಗಳಲ್ಲಿ ಕೊಂಚ ಹಿನ್ನಡೆ ಸ್ಥಿತಿಯಲ್ಲಿ ಆಗಾಗ ಆರ್ಥಿಕವಾಗಿ ಸಮಸ್ಯೆಗಳು ತೋರಿ ಬರುವುದು. ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು. ಮಿಶ್ರಫ‌ಲಗಳು ಅನುಭವಕ್ಕೆ ಬರುವುದು. ಶುಭವಿದೆ.

ಕನ್ಯಾ: ಜೀವನರಂಗದಲ್ಲಿ ಹಲವಾರು ವಾಸ್ತವಅವಕಾಶಗಳು ಪ್ರಾಪ್ತವಾಗಲಿವೆ. ಹಣಕಾಸಿನ ವಿಚಾರದಲ್ಲಿ ಹಂತಹಂತವಾಗಿ, ಆದರೆ ಸ್ಥಿರರೂಪದಲ್ಲಿ ಪ್ರಗತಿಗೊಂಡು ಉನ್ನತಿಗೇರುವುದು. ಕಿರು ಸಂಚಾರವಿರುವುದು.

ತುಲಾ: ಇತರರು ನಿಮ್ಮ ವಿಶ್ವಾಸದ ದುರುಪಯೋಗಿಸಿದಂತೆ ಗಮನಹರಿಸಿರಿ. ಹಾಗೇ ಸ್ವಯಂಕೃತ ಅಪರಾಧ ಮಾಡಬೇಡಿರಿ. ಖರ್ಚುವೆಚ್ಚಗಳ ಬಗ್ಗೆ ಹಿಡಿತವಿರಲಿ. ಇದು ಅನಿವಾರ್ಯ ಕೂಡಾ ಆಗಲಿದೆ. ತಾಳ್ಮೆ ಬೇಕು.

ವೃಶ್ಚಿಕ: ಮನೆಯಲ್ಲಿ ಸುಖ, ಸಂತೋಷಗಳಿಂದ ನೆಮ್ಮದಿ, ಮಕ್ಕಳಿಂದ ಸಂತಸ ಕಂಡುಬರಲಿದೆ. ಕ್ರಯವಿಕ್ರಯದಲ್ಲಿ ಉತ್ತಮ ಆದಾಯವಿರುವುದು. ಉದ್ಯೋಗದಲ್ಲಿ ಲಾಭ ಕಂಡುಬರಲಿದೆ. ಆಶಾದಾಯಕವಾಗಿರಿ.

ಧನು: ಕಾರ್ಯಕ್ಷೇತ್ರದಲ್ಲಿ ನಾನಾ ರೀತಿಯ ಬೆಳವಣಿಗೆಗಳು ಕಂಡುಬಂದರೂ ಕೊಂಚ ಗೊಂದಲಕ್ಕೆ ಕಾರಣವಾಗುವ ಸಮಸ್ಯೆಗಳಿಂದ ಯಾರನ್ನೂ ನಂಬದಂತಹ ಪರಿಸ್ಥಿತಿಯು ತೋರಿ ಬರುವುದು. ಅಧಿಕ ಖರ್ಚು ಬರಲಿದೆ.

ಮಕರ: ನಿಮಗೆ ದ್ರೋಹ ಬಗೆಯುವ ಇಲ್ಲವೇ ನಿಮ್ಮಿಂದ ಅನಾವಶ್ಯಕ ತುಂಬ ಖರ್ಚು ಮಾಡಿಸುವ ಚಂಚಲ ವ್ಯಕ್ತಿಗಳ ಸಂಪರ್ಕದಿಂದ ದೂರವಿರುವುದು. ನಿಮ್ಮ ಕಾರ್ಯಕ್ಷೇತ್ರದಲ್ಲಿ ಬಿಡುವು ಇರದು.

ಕುಂಭ: ಕೌಟುಂಬಿಕ ವಿಚಾರದಲ್ಲಿ ಅಸಮಾಧಾನಕರ ವಾತಾವರಣ. ಆರ್ಥಿಕ ಪರಿಸ್ಥಿತಿಯಲ್ಲಿ ತುಸು ಚೇತರಿಕೆ ಇರುತ್ತದೆ. ಕಾರ್ಯಕ್ಷೇತ್ರದಲ್ಲಿ ತುಸು ಸಾವಧಾನದಿಂದ ಮುಂದುವರಿಯಿರಿ. ಅನಾವಶ್ಯಕ ಸಂಶಯ ಬೇಡ.

ಮೀನ: ವ್ಯಾಪಾರ, ವ್ಯವಹಾರ, ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಕಂಡುಬರುವುದು. ಹೊಸ ಉದ್ಯಮಗಳಿಗೆ ಅವಕಾಶಗಳು ತೋರಿಬರುವುದು. ಅನಿರೀಕ್ಷಿತ ಘಟನೆಗಳಿಂದ ಗೊಂದಲಗಳು ತೋರಿಬರುವುದು.

ಎನ್.ಎಸ್. ಭಟ್

Advertisement

Udayavani is now on Telegram. Click here to join our channel and stay updated with the latest news.

Next