Advertisement

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ದೊಡ್ಡ ಜನರ ಸಹವಾಸದಿಂದ ನಷ್ಟ ಸಂಭವವಾಗಲಿದೆ

07:44 AM Feb 03, 2021 | Team Udayavani |

03-021-2021

Advertisement

ಮೇಷ: ವಿರೋಧಿಗಳಿಂದ ಉಪಟಳವು ಆಗಾಗ ಕಂಡುಬಂದು ಬೇಸರವಾಗಲಿದೆ. ಸ್ತ್ರೀ ಸಂಬಂಧ ಚಿಂತೆಯೂ, ಮಿತ್ರರಿಂದ ಹಿತವಚನ ಕಂಡುಬಂದು ಸಮಾಧಾನವಾಗಲಿದೆ. ಚಿತ್ತಚಾಂಚಲ್ಯವು ಕಾಡಲಿದೆ.

ವೃಷಭ: ಅಧಿಕ ಲಾಭವಿದ್ದರೂ ಅಷ್ಟೇ ಖರ್ಚು ಕಂಡು ಬರಲಿದೆ. ಉಳಿತಾಯ ಮಾಡಲು ಕಷ್ಟವಾಗ ಬಹುದು. ಹೊಸ ವಸ್ತ್ರಾಭರಣಗಳ ಖರೀದಿಯು ಕಂಡುಬಂದೀತು. ದೊಡ್ಡ ಜನರ ಸಹವಾಸದಿಂದ ನಷ್ಟವು ಸಂಭವವಾಗಲಿದೆ.

ಮಿಥುನ: ವ್ಯಾಪಾರ, ಉದ್ಯೋಗದಲ್ಲಿ ಅಲ್ಪ ಲಾಭವು, ಅಧಿಕ ಖರ್ಚು ಕಂಡುಬರಲಿದೆ. ಹಿತಶತ್ರುಗಳ ಕಾಟವು ಕಂಡುಬರುವುದು. ದೇಹಾರೋಗ್ಯವು ಉತ್ತಮವಿರುವುದು. ಪುಣ್ಯಕ್ಷೇತ್ರ ದರ್ಶನ, ಗುರುವಿನ ಅನುಗ್ರಹವು ತೋರಿಬರುವುದು.

ಕರ್ಕ: ಸರಕಾರೀ ಕೆಲಸಗಳು ವಿಫ‌ಲವಾಗಲಿದೆ. ಒತ್ತಡದ ಕೆಲಸಗಳಲ್ಲಿ ಕಾರ್ಯಸಿದ್ಧಿಯಾಗಲಿದೆ. ವ್ಯರ್ಥ ಚಿಂತೆಯು ಕಂಡುಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಅಲ್ಪ ಅಭಿವೃದ್ಧಿ ಕಂಡುಬರಲಿದೆ. ವಿರೋಧಿಗಳಿಂದ ಉಪದ್ರವವಿದೆ.

Advertisement

ಸಿಂಹ: ಕೋರ್ಟು ಕಚೇರಿಯ ಕೆಲಸಗಳಲ್ಲಿ ಅಪಜಯ, ಅಪಮಾನವು ಇದ್ದೀತು. ಇಷ್ಟ ಕಾರ್ಯಗಳು ನಿಧಾನಗತಿ ಯಲ್ಲಿ ಸಾಗಲಿದೆ. ಮನಸ್ಸಿಗೆ ಸಂತಾಪವು, ಮನೋವ್ಯಥೆಯು, ಅಧಿಕ ತಿರುಗಾಟವು ದುಂದುವೆಚ್ಚವು ಕಂಡುಬರುವುದು.

ಕನ್ಯಾ: ಆರ್ಥಿಕ ಅಡಚಣೆಯು, ಸಾಲದ ಬಾಧೆಯು, ಉತ್ಪನ್ನಕ್ಕಿಂತ ಖರ್ಚು ಹೆಚ್ಚಾದೀತು. ನಾನಾರೀತಿಯಲ್ಲಿ ಸಮಸ್ಯೆಗಳು ಎದುರಾದವು. ಹಲವಾರು ರೀತಿಯಲ್ಲಿ ವ್ಯವಹಾರ ಕೈಗೊಳ್ಳುವುದರಿಂದ ಅಲ್ಪ ನೆಮ್ಮದಿಯು ಕಾಣಸಿಗುವುದು.

ತುಲಾ: ದೇಹಾರೋಗ್ಯ ಉತ್ತಮವೂ, ಉತ್ಸಾಹದಾಯಕವೂ ಆಗಲಿದೆ. ಸ್ವಜನ, ಪರಜನರೊಡನೆ ಪ್ರೀತಿವೃದ್ಧಿಯು, ಹೊಸ ವಸ್ತ್ರಾಭರಣ ಖರೀದಿಯು ನಡೆದೀತು. ವಾಹನ ಸಂಗ್ರಹ, ಪರೋಪಕಾರಗಳಲ್ಲಿ ಮನಸ್ಸು ಸಮಾಧಾನವಾಗಲಿದೆ.

ವೃಶ್ಚಿಕ: ಗೃಹದಲ್ಲಿ ಶುಭ ಶೋಭನಾದಿ, ಮಂಗಲಕಾರ್ಯಗಳು ಜರಗಲಿವೆ. ಮನಸ್ಸಿಗೆ ಸಂತೋಷವೂ, ವಿರೋಧಿಗಳಿಗೆ ಮುಖಭಂಗವಾಗಲಿದೆ. ಬಂಧುಮಿತ್ರರು ಸಹಾಯ ಹಾಗೂ ಸಹಕಾರ ನೀಡಲಿರುವರು. ಇಷ್ಟಕಾರ್ಯಗಳು ನೆರವೇರುವುದು.

ಧನು: ಸ್ತ್ರೀಯರಿಂದ ಧನಪ್ರಾಪ್ತಿಯೋಗವೂ, ಉದ್ಯೋಗ ಕ್ಷೇತ್ರದಲ್ಲಿ ಏಳಿಗೆಯೂ ಕಂಡುಬರುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಮಾನ ಮನ್ನಣೆಯು ದೊರಕಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಮುಂದಾಳತ್ವ ವಹಿಸಿ ಸೈ ಎನಿಸಿಕೊಳ್ಳುವಿರಿ.

ಮಕರ: ಕೋರ್ಟುಕಚೇರಿ ಕಾರ್ಯಭಾಗದಲ್ಲಿ ಅಪಜಯ ಕಂಡುಬರುವುದು. ವ್ಯಾಪಾರ, ವ್ಯವಹಾರದಲ್ಲಿ ಧನಹಾನಿ ಯಾದೀತು. ಅಪವಾದವು ಕಾಡಲಿದೆ. ಸಿಟ್ಟಿನ ಭರದಲ್ಲಿ ಏನಾದರೊಂದು ಅವಿವೇಕದ ಕೆಲಸ ಮಾಡಿ ನಂತರ ಪಶ್ಚಾತ್ತಾಪ ಪಡುವಿರಿ.

ಕುಂಭ: ದಾನ, ಧರ್ಮ, ಪರೋಪಕಾರಗಳಲ್ಲಿ ಮನಸ್ಸು ನಿರಂತರ ಓಡಾಡುವುದು. ದುಷ್ಟಜನರಿಂದ ಹಾನಿ ಕಂಡುಬರುವುದು. ಸ್ತ್ರೀಸಂಬಂಧ ಚಿಂತೆಯು ಕಾಡಲಿದೆ. ವ್ಯರ್ಥ ಧನಹಾನಿ ಕಂಡುಬರುವುದು. ನೆಮ್ಮದಿಯ ಸಹಜೀವನವಿದೆ.

ಮೀನ: ಪ್ರಾಪಂಚಿಕ ಜೀವನದಲ್ಲಿ ನೆಮ್ಮದಿಯು ಕಂಡುಬರುವುದು. ದೇಹಾರೋಗ್ಯವು ಸುಧಾರಿಸಲಿದೆ. ಉತ್ಸಾಹವು, ಸಂತೋಷವು ಇದ್ದು ಗೃಹದಲ್ಲಿ ಮಂಗಲ ಕಾರ್ಯವು ಜರಗುವುದು. ಪುಣ್ಯಕ್ಷೇತ್ರಗಳ ಸಂದರ್ಶನ ಭಾಗ್ಯವಿದೆ

Advertisement

Udayavani is now on Telegram. Click here to join our channel and stay updated with the latest news.

Next