Advertisement

ನಿಮ್ಮ ಗ್ರಹ ಬಲ:ಈ ರಾಶಿಯವರಿಂದು ಮಾತು ಕಡಿಮೆ ಮಾಡಿದರೆ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಲಿದೆ

10:47 AM Jan 12, 2021 | Team Udayavani |

12-01-2021

Advertisement

ಮೇಷ: ಅತೀ ಮಹತ್ವದ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಶತ್ರುಗಳೂ ಚಕಿತಗೊಳ್ಳುವಂತೆ ಸಾಧನೆ ಮಾಡುವಿರಿ. ಪ್ರಯಾಣ, ಪ್ರವಾಸಾದಿಗಳಿಂದ ಸಂಭ್ರಮ ಪಡುವಿರಿ. ಆಯಕ್ಕಿಂತ ವ್ಯಯ ಅಧಿಕವಿರುವುದು.

ವೃಷಭ: ವರ್ಗಾವಣೆಯ ಕುರುಹು ವೃತ್ತಿಪರರಿಗೆ ಕಾಣಿಸಲಿದೆ. ಶಿಕ್ಷಣ ಕ್ಷೇತ್ರದವರಿಗೆ ತಲೆಚಿಟ್ಟು ಹಿಡಿವ ಹಾಗೆ ಕೆಲಸವಿರುತ್ತದೆ. ಮಾತು ಕಡಿಮೆ ಮಾಡಿದರೆ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಲಿದೆ. ಮುನ್ನಡೆಯಿರಿ.

ಮಿಥುನ: ಮಂಗಳ ಕಾರ್ಯದಲ್ಲಿ ಭಾಗಿಗಳಾಗುವಿರಿ. ಎಲೆಕ್ಟ್ರಾನಿಕ್‌ ಮಾಧ್ಯಮದವರಿಗೆ, ವೃತ್ತಿ ನಿರತರಿಗೆ ಒಳ್ಳೆಯ ಅವಕಾಶಗಳು ಕೂಡಿ ಬರಲಿದೆ. ಸರಕಾರಿ ಕಾರ್ಯ ಸಿಗುವ ಯೋಗವಿದೆ. ಎಲ್ಲಾ ಕಾರ್ಯದಲ್ಲಿ ಜಯವಿದೆ.

ಕರ್ಕ: ಸಂತಾನಾಪೇಕ್ಷಿಗಳಿಗೆ ಉತ್ತಮ ಯೋಗವು ಬಂದೀತು. ಗೃಹ ನಿರ್ಮಾಣದಂತಹ ಕೆಲಸ ಆರಂಭಿಸಲಿದ್ದೀರಿ. ನಿವೇಶನ ಖರೀದಿಗೆ ಇದು ಸಕಾಲ. ಧನವ್ಯಯ ಅತಿಯಾಗಿದ್ದರೂ ಇಷ್ಟಾರ್ಥ ಪ್ರಾಪ್ತಿಯಾಗಲಿದೆ. ಶುಭವಿರುವುದು.

Advertisement

ಸಿಂಹ: ವ್ಯವಹಾರದಲ್ಲಿ ಲಾಭವಿದೆ. ಆದರೂ ಧನಹಾನಿಗೆ ಹಲವು ಕಾರಣಗಳಿರುತ್ತವೆ. ಗುರಿಯತ್ತ ಮನಸಿಟ್ಟು ಕಾರ್ಯ ಕೈಗೊಂಡರೆ ಗೆಲುವು ಖಚಿತವಾಗಿರುತ್ತದೆ. ಆಪ್ತರ ಸಲಹೆಗೆ ಮನ ಕೊಡಿರಿ. ದುಃಖ ಹಂಚಿಕೊಳ್ಳಿರಿ.

ಕನ್ಯಾ: ಯೋಜನೆ ಹಾಕಿ ಕೆಲಸ ಸಾಧಿಸಿದ ಮೇಲೆಯೇ ಪ್ರಕಟಗೊಳ್ಳುವ ಮನೋವೃತ್ತಿಯವರಾದ ನೀವಿಂದು ಸ್ವಲ್ಪ ದಾರಿ ಬೇರೆ ಮಾಡಬೇಕಾದೀತು. ಸಂಪಾದನೆಯು ಚೆನ್ನಾಗಿದ್ದು ಲಾಭಾಂಶವೂ ಸಂಗ್ರಹವೂ ವೃದ್ಧಿಯಾಗಲಿದೆ.

ತುಲಾ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸೂಕ್ತ ವ್ಯವಸ್ಥೆಯಾಗಿ ಸಿಗಲಿದೆ. ವೃತ್ತಿಕ್ಷೇತ್ರದಲ್ಲಿ ಕಿರುಕುಳ ಕಂಡುಬಂದೀತು. ಪಿತ್ತಾಧಿಕ್ಯದಿಂದ ಆರೋಗ್ಯ ಹಾನಿಯಾಗಲಿದೆ.

ವೃಶ್ಚಿಕ: ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ದೊರಕದೆ ಉನ್ನತ ವಿದ್ಯಾಭ್ಯಾಸದಲ್ಲಿ ಕೊರತೆ ಕಾಣಿಸಲಿದೆ. ದಿನಸಿ ವ್ಯಾಪಾರ, ಕೃಷಿ ಉತ್ಪನ್ನದಲ್ಲಿ ಲಾಭಾಂಶ ಕಡಿಮೆಯಾಗುವ ಸಂಭವವಿದೆ. ಚಿಂತೆ ಮಾಡದಿರಿ.

ಧನು: ಹೋಟೇಲ್‌, ವಸತಿಗೃಹ, ಕಲಾಕ್ಷೇತ್ರಗಳ ಪ್ರಗತಿ ನಿಧಾನವಾಗಲಿದೆ. ದಿನವಹಿ ಸಂಭಾವನೆ ಪಡೆವ ನೌಕರರಿಗೆ ವೃತ್ತಿ ಸ್ಥಿರತೆ ಕಂಡುಬರಲಿದೆ. ವಂಚನಾ ಜಾಲಕ್ಕೆ ಸಿಲುಕದಿರಿ. ಧನ ವಿನಿಯೋಗವಿದೆ.

ಮಕರ: ಪತ್ನಿಯ ಅನಾರೋಗ್ಯ ನಿಮ್ಮ ತಲೆಗೆಡಿಸಲಿದೆ. ಪರಸ್ಪರ ಅನುಭವದ ಕೊರತೆಯಿಂದ ಅರ್ಧಕ್ಕೆ ನಿಂತೀತು. ಅಪಾದನೆಗಳು ಕಂಡುಬಂದೀತು. ಆದಾಯವು ಉತ್ತಮವಿದ್ದರೂ ತಾಪತ್ರಯ ತಪ್ಪದು.

ಕುಂಭ :ಬಂಧು ಭಾಂದವರ ಪ್ರೋತ್ಸಾಹ ದೊರಕಲಿದೆ. ಗಂಡಹೆಂಡತಿಯಲ್ಲಿ ವಿರಸವಿದ್ದರೂ ಸುಖಾಂತ್ಯ ಸುಗಮ ವೆನಿಸೀತು. ದೇವತಾರಾಧನೆಯಿಂದ ಶುಭಫ‌ಲ ಹೆಚ್ಚಿಸಿಕೊಳ್ಳಿರಿ. ಜನಾಕ್ರೋಶ ಭೀತಿಯ ವಾತಾವರಣವಿರುತ್ತದೆ.

ಮೀನ: ಅಲೆದಾಟಗಳು ಅಧಿಕವಾಗಿದ್ದು ಆರೋಗ್ಯವು ಹದಗೆಡಲಿದೆ. ಆಂತರಿಕ ಕಲಹ, ಗೃಹಕೃತ್ಯ, ಮಂಗಲ ಕಾರ್ಯ, ಪ್ರವಾಸ, ಆಭರಣ ಖರೀದಿ ಹೀಗೆ ಹಲವು ತರದ ಖರ್ಚುವೆಚ್ಚಗಳು. ತಲೆಬಿಸಿ ಮಾಡಲಿದೆ. ಶುಭವಿದೆ.

ಎನ್.ಎಸ್.ಭಟ್

Advertisement

Udayavani is now on Telegram. Click here to join our channel and stay updated with the latest news.

Next