Advertisement

ಇಂದು, ನಾಳೆ ರಾಹುಲ್‌ ಕೇರಳದಲ್ಲಿ

12:04 AM Apr 16, 2019 | Team Udayavani |

ಕಾಸರಗೋಡು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಎ.16 ಮತ್ತು 17ರಂದು ಕೇರಳದ ವಿವಿಧೆಡೆ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಲಿದ್ದಾರೆ.

Advertisement

ಎ. 16ರಂದು ಬೆಳಗ್ಗೆ ಪತ್ತನಾ ಪುರಂ ಮತ್ತು ಪತ್ತನಂತಿಟ್ಟ ದಲ್ಲಿ, ಸಂಜೆ ಆಲಪ್ಪುಳ ಹಾಗೂ ತಿರುವನಂತಪುರದಲ್ಲಿ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ.

ದಿ| ಮಾಣಿ ಮನೆಗೆ ಭೇಟಿ
ಆ ಬಳಿಕ ಪಾಲಾಯಿಗೆ ತೆರಳಿ ಇತ್ತೀಚೆಗೆ ನಿಧನರಾದ ಕೇರಳ ಕಾಂಗ್ರೆಸ್‌ ಅಧ್ಯಕ್ಷ ಕೆ.ಎಂ.ಮಾಣಿ ಅವರ ಮನೆಗೆ ಭೇಟಿ ನೀಡಲಿದ್ದಾರೆ. ರಾತ್ರಿ ಕಣ್ಣೂರಿಗೆ ತಲುಪಲಿದ್ದಾರೆ.

ಎ. 17ರಂದು ಬೆಳಗ್ಗೆ 7.30ಕ್ಕೆ ಕಣ್ಣೂರು ಸಾಧು ಆಡಿಟೋರಿಯಂನಲ್ಲಿ ಕಾಸರಗೋಡು, ಕಲ್ಲಿಕೋಟೆ, ಕಣ್ಣೂರು ಜಿಲ್ಲೆಗಳ ಯುಡಿಎಫ್‌ ನೇತಾರರೊಂದಿಗೆ ಚರ್ಚಿಸಲಿದ್ದಾರೆ. ಆ ಬಳಿಕ ವಯನಾಡಿಗೆ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ.

ಬೆಳಗ್ಗೆ ಬತ್ತೇರಿಯಲ್ಲೂ, ತಿರುವಂಬಾಡಿಯಲ್ಲೂ, ಮಧ್ಯಾಹ್ನ ವಂಡೂರಿನಲ್ಲೂ, ಪಾಲಾ^ಟ್‌, ಪೊನ್ನಾನಿ, ಆಲತ್ತೂರು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next