Advertisement

ಇಂದು ಮಹತ್ವದ ಬಿಸಿಸಿಐ ಸಭೆ

12:24 AM Jul 26, 2019 | Team Udayavani |

ಮುಂಬಯಿ: ಬಿಸಿಸಿಐ ಆಡಳಿತಾಧಿಕಾರಿಗಳ ಮಹತ್ವದ ಸಭೆ ಶುಕ್ರವಾರ ನಡೆಯಲಿದೆ. ರಾಹುಲ್‌ ದ್ರಾವಿಡ್‌ ಮುಖ್ಯಸ್ಥರಾಗಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ ಬ್ಯಾಟಿಂಗ್‌ ತರಬೇತುದಾರರಾಗಲು ವಿಕ್ರಮ್‌ ರಾಥೋಡ್‌ಗೆ ಎದುರಾಗಿ ರುವ ಸ್ವಹಿತಾಸಕ್ತಿ ಸಮಸ್ಯೆ, ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಚುನಾವಣೆಗೆ ಚುನಾ ವಣಾಧಿಕಾರಿಗಳನ್ನು ನೇಮಿಸುವುದು, ರಾಜ್ಯ ಸಂಸ್ಥೆಗಳು ಲೋಧಾ ಶಿಫಾರಸ ನ್ನು ಜಾರಿ ಮಾಡುವುದು ಇತ್ಯಾದಿ ಪ್ರಕ್ರಿಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ.

Advertisement

ರಾಜ್ಯ ಸಂಸ್ಥೆಗಳ ಚುನಾವಣೆಗೆ ಅಧಿಕಾರಿಗಳನ್ನು ನೇಮಿಸುವುದಕ್ಕೆ ಆರಂಭದಲ್ಲಿ ನೀಡಲ್ಪಟ್ಟಿದ್ದ ಗಡುವು ಜು. ಒಂದು. ಆದರೆ ಅದನ್ನು ಜು. 25ಕ್ಕೆ ವಿಸ್ತರಿಸಲಾಗಿತ್ತು. ಈ ಬಗ್ಗೆ ಆಗಿರುವ ಬೆಳವಣಿಗೆಗಳನ್ನು ಗಮನಿಸ ಲಾಗುತ್ತದೆ. ಲೋಧಾ ಸಮಿತಿ ಶಿಫಾರ ಸನ್ನು ಯಾವ ಸಂಸ್ಥೆಗಳು ಪೂರ್ಣ ಅಳವಡಿಸಿಕೊಂಡಿವೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ಅಳವಡಿಸಿಕೊಳ್ಳದಿದ್ದರೆ, ಅಕ್ಟೋಬರ್‌ 22ರಂದು ನಡೆಯುವ ಬಿಸಿಸಿಐ ಚುನಾವಣೆಯಲ್ಲಿ ಸಂಬಂಧಪಟ್ಟ ರಾಜ್ಯಸಂಸ್ಥೆಯ ಪದಾಧಿಕಾರಿಗಳು ಸ್ಪರ್ಧಿಸಲು ಸಾಧ್ಯವಿಲ್ಲ. ಅದೂ ಅಲ್ಲದೇ ಆ ಸಂಸ್ಥೆಗೆ ಬಿಸಿಸಿಐ ಮಾನ್ಯತೆಯೂ ಇರುವುದಿಲ್ಲ, ಅದಕ್ಕೆ ಯಾವುದೇ ಆರ್ಥಿಕ ನೆರವು ಸಿಗುವುದಿಲ್ಲ.

ಚುನಾವಣೆಯ ಅಧಿಕಾರ
2 ವರ್ಷಗಳಿಂದ ಸರ್ವೋಚ್ಚ ನ್ಯಾಯಾಲಯದ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಬಿಸಿಸಿಐಗೆ ಅ. 22ರಂದು ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಸೆ. 14ರಂದೇ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಚುನಾವಣೆಗಳನ್ನು ಮುಗಿಸಬೇಕು ಎಂದು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ 36 ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಪೈಕಿ 20 ಸಂಸ್ಥೆಗಳು ಚುನಾವಣಾಧಿಕಾರಿಯನ್ನು ನೇಮಿಸಿ, ಚುನಾವಣೆಗೆ ಸಿದ್ಧತೆ ಮಾಡಿಕೊಂಡಿವೆ. ಅಧಿಕಾರಿಯನ್ನು ನೇಮಿಸದ ಸಂಸ್ಥೆಗಳು ಚುನಾವಣೆ ನಡೆಸುವ ಅಧಿಕಾರವನ್ನೇ ಕಳೆದುಕೊಳ್ಳಲಿವೆ. ಸಭೆಯಲ್ಲಿ ಈ ಎಲ್ಲ ಸಂಗತಿಗಳು ಚರ್ಚೆಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next