Advertisement

ಇಂದು ಸೊನೆಟ್‌ ಬರೆಯುವ ವಿಶೇಷ ಕಮ್ಮಟ

01:13 PM Apr 28, 2021 | Team Udayavani |

ಮುಂಬಯಿ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾನಿಲಯದ ವತಿ ಯಿಂದ ಎ. 28ರಂದು ಮಧ್ಯಾಹ್ನ 12ರಿಂದ ಸೊನೆಟ್‌ (ಸುನೀತ) ಬರೆಯುವ ಕ್ರಮದ ಕುರಿತು ವಿಶೇಷ ಕಮ್ಮಟವು ಹಿರಿಯ ಸಾಹಿತಿಗಳು, ವಿದ್ವಾಂಸ ಡಾ| ಜೀವಿ ಕುಲಕರ್ಣಿ ಅವರ ನಿರ್ದೇಶನದಲ್ಲಿ ಆನ್‌ಲೈನ್‌ ಮೂಲಕ ನಡೆಯಲಿದೆ.

Advertisement

ಕನ್ನಡ ವಿಭಾಗ ಮುಂ ಬಯಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕುವೆಂಪು,
ಕಣವಿ, ಸನದಿ ಅವರ ಸುನೀತಗಳನ್ನು ವಿದ್ಯಾರ್ಥಿಗಳಾದ ನಳಿನಾ ಪ್ರಸಾದ್‌, ಅಮೃತಾ ಶೆಟ್ಟಿ ಹಾಗೂ ಕಲಾ ಭಾಗ್ವತ್ ಅವರು ವಾಚನ ಮಾಡಲಿದ್ದಾರೆ.

ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಸಂಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಆಸಕ್ತರು ಝೂಮ್‌ ಮೂಲಕ ಪಾಲ್ಗೊಳ್ಳಬಹುದು ಅಥವಾ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾನಿಲ ಯದ ಫೇಸ್‌ಬುಕ್‌ ಪೇಜ್‌ ಮೂಲಕ ನೇರಪ್ರಸಾರ ವೀಕ್ಷಿಸಬಹುದು ಎಂದು ವಿಭಾಗದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next