Advertisement

ಲಾಟರಿ ಹೊಡೆಯಬೇಕೆಂದರೆ‌..

02:54 PM Apr 20, 2020 | mahesh |

ಹಿಂದೊಮ್ಮೆಯೂ ಕೆಲಸವಿಲ್ಲದ ಸಂದರ್ಭ ಸೃಷ್ಟಿಯಾಗಿತ್ತು. ಮನೆಯಲ್ಲೇ ಇದ್ದ ವ್ಯಕ್ತಿಯೊಬ್ಬ, ಒಂದಷ್ಟು ಹಣ ಮಾಡಲು ಯೋಚಿಸಿದ. ತಿಂಗಳ ಕೊನೆಯಲ್ಲಿ ಕೋಟಿ ರೂಪಾಯಿ ಮೊತ್ತದ ಲಾಟರಿ ಡ್ರಾ ಇದೆ ಎಂಬ ಸಂಗತಿಯೂ ಅವನಿಗೆ ಗೊತ್ತಾಯಿತು. ಆತ ತಡ ಮಾಡಲಿಲ್ಲ. ದೇವರ ಎದುರು ನಿಂತು – ದೇವರೇ, ನನಗೆ ಕೋಟಿ ರೂಪಾಯಿ ಲಾಟರಿ ಹೊಡೆಯುವಂತೆ ಮಾಡಿದರೆ, ನಿನಗೆ 10 ಲಕ್ಷವನ್ನು ಕಾಣಿಕೆಯಾಗಿ ಅರ್ಪಿಸುವೆ ಎಂದು ಹರಕೆ ಕಟ್ಟಿಕೊಂಡ. ಈ ವಿಷಯ ತಿಳಿದ ಅವನ ಹೆಂಡತಿ- ‘ಒಂದು ಕೋಟಿ ರೂಪಾಯಿ ಲಾಟರಿಯ ಮೊತ್ತದಲ್ಲಿ, ದೇವರಿಗೆ ಕೇವಲ 10 ಲಕ್ಷ ಕೊಡುವುದು ಸರಿಯಲ್ಲ, ಹೀಗೆ ಮಾಡಿದರೆ, ದೇವರ ಕೃಪೆಯೇ ಸಿಗದೇ ಹೋಗಬಹುದು. ಹಾಗಾಗಿ, ದೇವರಿಗೆ ಅರ್ಧ ಭಾಗ ಕಾಣಿಕೆಯಾಗಿ ಕೊಡೋಣ’ ಅಂದಳು. ಆನಂತರದಲ್ಲಿ, ಇಬ್ಬರೂ ಲೆಕ್ಕಾಚಾರ ಮಾಡಿ, ಈ ಕಷ್ಟದ ಸಮಯದಲ್ಲಿ,ಲಾಟರಿ 10 ಲಕ್ಷ ಸಿಕ್ಕರೆ ಸಾಕು, ಉಳಿದ ಹಣವನ್ನೆಲ್ಲ ದೇವರಿಗೇ ಕಾಣಿಕೆಯಾಗಿ ನೀಡೋಣವೆಂದು ನಿರ್ಧರಿಸಿದರು.

Advertisement

ಲಾಟರಿ ಹೊಡೆಯಲು ಇನ್ನೊಂದು ದಿನ ಬಾಕಿಯಿದೆ ಅನ್ನುವಾಗಲೇ ಪ್ರತ್ಯಕ್ಷವಾದ ದೇವರು- ಲಾಟರಿ ಟಿಕೆಟ್‌ ತಗೊಂಡು ಆಗಿದೆಯಾ? ಎಂದು ಕೇಳಿದ. ಈ ಭಕ್ತ, ಇನ್ನೂ ಇಲ್ಲ, ತಗೋಬೇಕು ಅನ್ನುತ್ತಾನೆ. ಆಗ ದೇವರು- ‘ಮೂರ್ಖ, ಲಾಟರಿ ಹೊಡೆಯಬೇಕು ಅಂದ್ರೆ ಮೊದಲೇ ಟಿಕೆಟ್‌ ತಗೋಬೇಕು ‘ ಎಂದು ಹೇಳಿ ಮಾಯವಾದನಂತೆ.

ಈ ಕಥೆಯನ್ನು ಈಗಿನ ಸಂದರ್ಭಕ್ಕೆ ಹೋಲಿಸಿಕೊಂಡು ನೋಡಿ: ಲಾಕ್‌ ಡೌನ್‌ನ ಅವಧಿ ಮುಗಿಯುವ ಮುನ್ನ ಒಂದಷ್ಟು ಕಾಸು ಮಾಡಬೇಕು ಅಂತ ಹಲವರು ಯೋಚಿಸುತ್ತಾ ಇದ್ದಾರೆ. ಆದರೆ, ಯಾರೊಬ್ಬರೂ ಹೊಸ ಕೆಲಸ ಮಾಡುವ, ಮನೆಯಲ್ಲಿದ್ದೇ ಸಂಪಾದಿಸುವ ಸಾಧ್ಯತೆಯ ಬಗ್ಗೆ ಯೋಚಿಸುತ್ತಲೇ ಇಲ್ಲ. ಇನ್ನು ಲಾಟರಿ ಹೊಡೆಯುವ ಸಾಧ್ಯತೆ ಎಲ್ಲಿದೆ?

Advertisement

Udayavani is now on Telegram. Click here to join our channel and stay updated with the latest news.

Next