Advertisement

ಜನವರಿಗೆ “ರಾಜೀವ’ತೆರೆಗೆ

10:00 AM Dec 30, 2019 | Lakshmi GovindaRaj |

ಮಯೂರ್‌ ಪಟೇಲ್‌ “ರಾಜೀವ’ ಎಂಬ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜನವರಿ 03 ರಂದು ತೆರೆಕಾಣುತ್ತಿದೆ. ಈ ಸಿನಿಮಾದಲ್ಲಿ “ರಾಜೀವ’ನಾಗಿ ಮಯೂರ್‌ ಪಟೇಲ್‌ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರಿಗೆ ಮೂರು ಶೇಡ್‌ನ‌ ಪಾತ್ರ ಸಿಕ್ಕಿದೆ ಯಂತ. 25 ವರ್ಷದ ಯುವಕರಾಗಿ, 40 ವರ್ಷದ ವಯಸ್ಕರಾಗಿಯೂ ಹಾಗು 60 ವರ್ಷದ ವ್ಯಕ್ತಿಯಾಗಿಯೂ ಅವರು ಗಮನ ಸೆಳೆಯಲಿದ್ದಾರೆ.

Advertisement

ಇನ್ನು, ಚಿತ್ರವನ್ನು ಫ್ಲೈಯಿಂಗ್‌ ಕಿಂಗ್‌ ಮಂಜು ನಿರ್ದೇಶಿಸಿದ್ದಾರೆ. ಇದೊಂದು ಯುವ ರೈತರ ಕುರಿತಾದ ಚಿತ್ರ. ಬೆಳೆನಾಶ, ಸಾಲಬಾಧೆ ಹೀಗೆ ಇನ್ನಿತರೆ ಕಾರಣಗಳಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಂತಹ ಸೂಕ್ಷ್ಮ ವಿಚಾರ ಇಟ್ಟುಕೊಂಡು ತೆರೆಯ ಮೇಲೆ ಬಿತ್ತರಿಸುವ ಪ್ರಯತ್ನವಾಗಿದೆ. ಚಿತ್ರದ ನಾಯಕ ಐಎಎಸ್‌ ಮಾಡಿ, ಪಟ್ಟಣದಿಂದ ಪುನಃ ಹಳ್ಳಿಗೆ ಹಿಂದಿರುಗುತ್ತಾನೆ.

ಅಲ್ಲಿ ನಡೆಯುವ ಘಟನೆ ಕಂಡು ಮರಗುತ್ತಾನೆ. ನಂತರ ಹಳ್ಳಿ ಬಿಟ್ಟು ಪಟ್ಟಣಕ್ಕೆ ಹೊರಡುವ ಯುವಕರ ಮನಸ್ಸು ಬದಲಿಸಿ, ಹಳ್ಳಿಯಲ್ಲೇ ಕೃಷಿ ಮಾಡಲು ಉತ್ತೇಜಿಸಿ, ಹೋರಾಡು ತ್ತಾನೆ ಎಂಬುದು ಚಿತ್ರದ ಹೈಲೈಟ್‌. ಚಿತ್ರವನ್ನು ಮಂಡ್ಯ, ಬೆಂಗಳೂರು ಇತರೆಡೆ ಚಿತ್ರೀಕರಿ ಸಲಾಗಿದೆ. ಚಿತ್ರಕ್ಕೆ ರಮೇಶ್‌ ನಿರ್ಮಾಣವಿದ್ದು, ಇವರ ಜೊತೆ ಕಿರಣ್‌ ಕೂಡ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ.

ಚಿತ್ರಕ್ಕೆ ರೋಹಿತ್‌ ಸೋವರ್‌ ಸಂಗೀತವಿದೆ. ಶೇಖರ್‌ ಸೋವರ್‌ ಆರು ಗೀತೆ ರಚಿಸಿದ್ದಾರೆ. ಆ ಪೈಕಿ ಮಯೂರ್‌ ಪಟೇಲ್‌ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ವಿಜಯ್‌ ಸೋವರ್‌ ಸಂಕಲನವಿದೆ. ವರ್ಧನ್‌ ನೃತ್ಯವಿದೆ. ಕಾಕೋಳು ರಾಮಯ್ಯ ಅವರ ಸಂಭಾಷಣೆ ಇದೆ. ಆನಂದ್‌ ಇಳೆಯರಾಜ ಅವರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next