Advertisement

ಕೈದಿಗೆ ಸಂತಾನೋತ್ಪತ್ತಿ ರಜೆ ನೀಡಿದ ಮದ್ರಾಸ್‌ ಹೈಕೋರ್ಟ್‌

12:29 PM Jan 25, 2018 | Team Udayavani |

ಮಧುರೆ : ತಿರುನೆಲ್ವೇಲಿ ಜಿಲ್ಲೆಯ ಕೇಂದ್ರ ಬಂಧೀಖಾನೆಯಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 40 ವರ್ಷ ಪ್ರಾಯದ ಕೈದಿಗೆ ಮದ್ರಾಸ್‌ ಹೈಕೋರ್ಟ್‌ ಎರಡು ವಾರಗಳ “ಸಂತಾನೋತ್ಪತ್ತಿ ರಜೆ’ಯನ್ನು ನೀಡಿದೆ.

Advertisement

ಜಸ್ಟಿಸ್‌ ಎಸ್‌ ವಿಮಲಾ ದೇವಿ ಮತ್ತು ಟಿ ಕೃಷ್ಣ ವಲ್ಲಿ ಅವರನ್ನು ಒಳಗೊಂಡು ವಿಭಾಗೀಯ ಪೀಠ ತಿರುನೇಲ್ವಿàಯ ಪಾಳಯಂಕೋಟ್ಟೈ ಎಂಬಲ್ಲಿನ ಕೇಂದ್ರ ಬಂಧೀಖಾನೆಯಲ್ಲಿರುವ ಕೈದಿ ಸಿದ್ದಿಕ್‌ ಅಲಿ ಗೆ ಎರಡು ವಾರಗಳ “ಸಂತಾನೋತ್ಪತ್ತಿ ರಜೆ’ಯನ್ನು ನೀಡಿತು. ಸಿದ್ದಿಕ್‌ ಅಲಿಯ 32ರ ಹರೆಯ ಪತ್ನಿ ತನ್ನ ಪತಿಗಾಗಿ ಹೆಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಸಲ್ಲಿಸಿದ್ದಳು.  

ಕೈದಿಗಳಿಗೆ ತಮ್ಮ ಪತ್ನಿಯನ್ನು ಕೂಡುವುದಕ್ಕೆ ಅವಕಾಶವಿರುವ ಹಕ್ಕು ಅನೇಕ ದೇಶಗಳಲ್ಲಿದ್ದು ಅಂಥದ್ದುನ್ನು ಇಲ್ಲಿಯೂ ತರುವುದನ್ನು ಪರಿಗಣಿಸುವುದಕ್ಕೆ ಸರಕಾರ ಸಮಿತಿಯೊಂದನ್ನು ರೂಪಿಸಬೇಕು ಎಂದು ಕೋರ್ಟ್‌ ಈ ಸಂದರ್ಭದಲ್ಲಿ ಹೇಳಿತು. 

Advertisement

Udayavani is now on Telegram. Click here to join our channel and stay updated with the latest news.

Next