Advertisement

ಲಂಕಾ ನೌಕಾ ಪಡೆ ದಾಳಿಗೆ ಐವರು ತ.ನಾ.ಮೀನುಗಾರರಿಗೆ ಗಾಯ

12:47 PM Apr 05, 2018 | Team Udayavani |

ನಾಗಪಟ್ಟಿನಂ, ತಮಿಳು ನಾಡು : ಲಂಕೆಯ ನೌಕಾಪಡೆ ಸಿಬಂದಿಗಳು ವೇದಾರಣ್ಯಂ ಸಮುದ್ರದಲ್ಲಿ ನಡೆಸಿದ ದಾಳಿಗೆ ತಮಿಳು ನಾಡಿನ ಐವರು ಮೀನುಗಾರರು ಗಾಯಗೊಂಡಿರುವುದಾಗಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬುಧವಾರ ತಡರಾತ್ರಿ ಲಂಕಾ ನೌಕಾಪಡೆ ಸಿಬಂದಿಗಳು ನಡೆಸಿದ ದಾಳಿಯಲ್ಲಿ ನಾಗಪಟ್ಟಿನಂ ಜಿಲೆಲಯ ನಾಗೋರ್‌ನ ಐವರು ಬೆಸ್ತರು ಗಾಯಗೊಂಡರು. ಈ ಬೆಸ್ತರು ಇಲ್ಲಿಂದ 32 ನಾಟಿಕಲ್‌ ಮೈಲು ದೂರದಲ್ಲಿ ತೊಪ್ಪುತ್ತೈ ಎಂಬಲ್ಲಿಗೆ ಸಮೀಪ ಮೀನುಗಾರಿಕೆ ನಡೆಸುತ್ತಿದ್ದರು. 

ಲಂಕಾ ನೌಕಾಪಡೆ ಸಿಬಂದಿಗಳು ಮೀನುಗಾರರು ಹಿಡಿದಿದ್ದ ಮೀನುಗಳನ್ನು ಮತ್ತು ಜಿಪಿಎಸ್‌ ಸಲಕರಣೆಯನ್ನು ಮತ್ತು ಮೀನುಗಾರಿಕೆ ಬಲೆಯನ್ನು ವಶಪಡಿಸಿಕೊಂಡರು ಎಂದು ಗಾಯಾಳುಗಳಲ್ಲಿ ಒಬ್ಬರಾದ ರಮೇಶ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next