Advertisement

ಪ್ರಧಾನಿ ಮಧ್ಯ ಪ್ರವೇಶಿಸಲಿ

12:55 AM Jun 25, 2019 | mahesh |

ಚೆನ್ನೈ: ಮೇಕೆದಾಟು ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿ ಪತ್ರ ಬರೆದಿದ್ದಾರೆ. ಮೇಕೆದಾಟು ಯೋಜನೆಗೆ ಕರ್ನಾಟಕ ಸರ್ಕಾರ ಅನುಮತಿ ಕೋರುತ್ತಿರುವುದು 2018ರಲ್ಲಿ ಕಾವೇ ಜಲ ವಿವಾದಗಳ ನ್ಯಾಯಮಂಡಳಿ ಹಾಗೂ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಅವರು ಪತ್ರದಲ್ಲಿ ಆಕ್ಷೇಪಿಸಿದ್ದಾರೆ. ಅಲ್ಲದೆ, ಕರ್ನಾಟಕದ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ಪರಿಸರ ಸಚಿವಾಲಯಕ್ಕೆ ಸೂಚಿಸಬೇಕೆಂದೂ ಪ್ರಧಾನಿಯನ್ನು ಅವರು ಕೋರಿದ್ದಾರೆ.

Advertisement

ಮೇಕೆದಾಟು ಏತ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗೆ ಕರ್ನಾಟಕ ಕಾವೇರಿ ನೀರಾವರಿ ನಿಗಮ ನಿಯಮಿತವು ಪರಿಸರ ಸಚಿವಾಲಯದ ಅನುಮತಿ ಕೋರಿತ್ತು. ಆದರೆ ತಮಿಳುನಾಡು ಮತ್ತು ಇತರ ನದೀ ತಟದ ರಾಜ್ಯಗಳ ಅನುಮತಿಯನ್ನು ಕೋರಿಲ್ಲ. ಕಾವೇರಿಯಲ್ಲಿ ಮೊದಲೇ ನೀರಿನ ಕೊರತೆಯಿದೆ. ಈ ಮಧ್ಯೆಯೂ ಇಂತಹ ಯೋಜನೆಯನ್ನು ಜಾರಿಗೊಳಿಸುವುದರಿಂದ ಇತರ ರಾಜ್ಯಗಳ ನೀರಿನ ಪಾಲಿಗೆ ತೊಂದರೆಯಾಗಲಿದೆ ಎಂದು ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next