Advertisement

ಕೊಯಮತ್ತೂರು ಸ್ಫೋಟ ಪ್ರಕರಣ ತನಿಖೆ ತೀವ್ರ; ಮುಬಿನ್ ಮನೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಪರ ಕೈಬರಹ

03:42 PM Nov 04, 2022 | Team Udayavani |

ಕೊಯಮತ್ತೂರು: ಅಕ್ಟೋಬರ್ 23 ರಂದು ನಗರದಲ್ಲಿ ಸಂಭವಿಸಿದ ಕಾರು ಸ್ಫೋಟದಲ್ಲಿ ಸಾವನ್ನಪ್ಪಿದ ಜಮೇಶಾ ಮುಬಿನ್ ಮನೆಯಿಂದ ವಶಪಡಿಸಿಕೊಂಡ ವಸ್ತುಗಳಲ್ಲಿ ಮೂಲಭೂತವಾದಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಸಂಬಂಧಿತ ಕೈಬರಹದ ಟಿಪ್ಪಣಿಗಳು ಸೇರಿವೆ.

Advertisement

ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ನಗರ ಪೊಲೀಸರು ಈ ಹಿಂದೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯನ್ನು ಅನ್ವಯಿಸಿದ್ದು, ಎನ್‌ಐಎ ಪ್ರಕರಣದ ತನಿಖೆ ನಡೆಸುತ್ತಿದೆ.

”ಅಲ್ಲಾಹನ ಮನೆ ಮುಟ್ಟಿದವರು ಬೇರು ಸಮೇತ ಕಿತ್ತು ಹೋಗುತ್ತಾರೆ”(“ಅಲ್ಲಾಹುವಿನ್ ಇಲ್ಲತಿನ್ಮೀದು ಕೈ ವೈತಲ್ ವೆರರುಪ್ಪೊಂ” ) ಎಂದು ತಮಿಳಿನಲ್ಲಿ ಬರೆದಿದ್ದ ಸ್ಲೇಟ್ ಅನ್ನು ಮುಬಿನ್ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.

ಆರಂಭದಲ್ಲಿ ನಗರದ ಪೊಲೀಸರು ಮುಬಿನ್  ಮನೆಯಿಂದ ವಶಪಡಿಸಿಕೊಂಡ ಇತರ ದಾಖಲೆಗಳು ಮತ್ತು ಜಿಹಾದ್’ ಕುರಿತ ಕೆಲವು ಬಲವಾದ ಬರಹಗಳು, ಭಯೋತ್ಪಾದಕ ಸಂಘಟನೆ ಐಸಿಸ್ ಪರ ರೇಖಾಚಿತ್ರಗಳು, ಮೂಲಭೂತವಾದವನ್ನು ಸೂಚಿಸುತ್ತವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

“ಜಿಹಾದ್ ಯುವಕರ ಕರ್ತವ್ಯವೇ ಹೊರತು ಮಕ್ಕಳು ಮತ್ತು ಹಿರಿಯರ ಕರ್ತವ್ಯವಲ್ಲ” ಎಂದು ಹೇಳುವ ಕೈಬರಹದ ಟಿಪ್ಪಣಿಯನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ.

Advertisement

ತನಿಖೆಯನ್ನು ಕೈಗೆತ್ತಿಕೊಂಡಿರುವ ಎನ್‌ಐಎ, ಈ “ಅಧಿಕೃತ ದಾಖಲೆಗಳ” ಆಧಾರದ ಮೇಲೆ ತನಿಖೆಯನ್ನು ತೀವ್ರಗೊಳಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಮುಬಿನ್ ನನ್ನು 2019 ರಲ್ಲಿ ರಾಷ್ಟ್ರೀಯ ಏಜೆನ್ಸಿ ವಿಚಾರಣೆ ನಡೆಸಿತ್ತು. ಅಕ್ಟೋಬರ್ 23 ರಂದು, ದೀಪಾವಳಿಯ ಒಂದು ದಿನ ಮುಂಚಿತವಾಗಿ, ನಗರದ ಕೋಮು ಸೂಕ್ಷ್ಮ ಪ್ರದೇಶವಾದ ಉಕ್ಕಡಂನ ಕೊಟ್ಟೈ ಈಶ್ವರನ್ ದೇವಸ್ಥಾನದ ಹೊರಗೆ ಮುಬಿನ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಆತ ಸಾವನ್ನಪ್ಪಿದ್ದ.

ಹುಡುಕಾಟದ ಸಮಯದಲ್ಲಿ, ಪೊಲೀಸರು ಮುಬಿನ್ ಮನೆಯಿಂದ 75 ಕೆಜಿ ಕಡಿಮೆ ತೀವ್ರತೆಯ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಮುಬಿನ್‌ನ ಆರು ಮಂದಿ ಸಹಚರರನ್ನು ಇದುವರೆಗೆ ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next