Advertisement

ತಿರುಪತಿಗೆ ಬಡ್ಡಿಯೇ 845 ಕೋಟಿ

02:52 AM Apr 25, 2019 | mahesh |

ತಿರುಪತಿ: ಬರೋಬ್ಬರಿ ವಾರ್ಷಿಕ 845 ಕೋಟಿ ರೂ. ಬಡ್ಡಿ… ಇದು ಯಾವ ಸಾಲದ ಮೇಲೆ ಎಂದು ಲೆಕ್ಕ ಹಾಕಬೇಡಿ. ವಿಶ್ವದ ಅತ್ಯಂತ ಶ್ರೀಮಂತ ದೇಗುಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಿರುಪತಿಯ ಶ್ರೀ ವೆಂಕಟೇಶ್ವರ ದೇಗುಲದ ಆಡಳಿತ ಮಂಡಳಿಯು ಸರಕಾರಿ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ನಿರಖು ಠೇವಣಿಯಾಗಿ ಇರಿಸಿರುವ 12 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತಕ್ಕೆ ಸಿಗುವ ಬಡ್ಡಿಯ ಮೊತ್ತವಿದು.

Advertisement

ತಿರುಪತಿ ತಿರುಮಲ ದೇವಸ್ಥಾನಂನ (ಟಿಟಿಡಿ) ಹಿರಿಯ ಅಧಿಕಾರಿ “ಪಿಟಿಐ’ ಸುದ್ದಿ ಸಂಸ್ಥೆ ಜತೆಗೆ ಬುಧವಾರ ಮಾತನಾಡಿ, ದೇಗುಲ ವರ್ಷದಿಂದ ವರ್ಷಕ್ಕೆ ಶ್ರೀಮಂತವಾಗುತ್ತಿದೆ. ವಿಶ್ವದ ಎಲ್ಲೆಡೆಯಿಂದ 2.5 ಕೋಟಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಅವ ರಿಂದಾಗಿ 3,100 ಕೋಟಿ ರೂ. ವಾರ್ಷಿಕ ವಾಗಿ ಆದಾಯ ಬರುತ್ತಿದೆ ಎಂದು ಹೇಳಿದ್ದಾರೆ. ಟಿಟಿಡಿ ಬಳಿ 8.7 ಟನ್‌ ಶುದ್ಧ ಚಿನ್ನ ಇದೆ. ಈ ಪೈಕಿ 1,938 ಕೆಜಿ ಚಿನ್ನ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ, 5,387 ಕೆಜಿ ಚಿನ್ನವನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಇರಿಸಲಾಗಿದೆ ಎಂದಿದ್ದಾರೆ.

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ನಲ್ಲಿದ್ದ 1,381 ಕೆ.ಜಿ. ಚಿನ್ನ ಇತ್ತೀಚೆಗಷ್ಟೇ ಟಿಟಿಡಿಗೆ ವಾಪಸಾಗಿದೆ ಎಂದಿದ್ದಾರೆ. ಇದರ ಜತೆಗೆ ಭಕ್ತರು ಅರ್ಪಿಸಿದ ಆಕರ್ಷಕ ಅಲಂಕಾರಿಕ ಕಲ್ಲುಗಳಿಂದ ಒಡಗೂಡಿದ 550 ಕೆಜಿ ವಿವಿಧ ರೀತಿಯ ಚಿನ್ನದ ಆಭರಣಗಳು ಇವೆ ಎಂದು ಆ ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next