Advertisement

ತುಂಗಾ ನದಿ ಮಲಿನ ಮಾಡದಿರಿ

06:23 PM Apr 24, 2020 | Naveen |

ತೀರ್ಥಹಳ್ಳಿ: ತುಂಗಾ ನದಿ ಈ ಭಾಗದ ಜೀವನದಿಯಾಗಿದ್ದು ಅದನ್ನು ಮಲಿನ ಮಾಡದಿರಿ ಎಂದು ತಹಶೀಲ್ದಾರ್‌ ಡಾ| ಶ್ರೀಪಾದ್‌ ಹೇಳಿದರು. ಗುರುವಾರದ “ಉದಯವಾಣಿ’ಯಲ್ಲಿ ಪ್ರಕಟವಾದ “ಸಾಂಕ್ರಾಮಿಕ ರೋಗ ಹರಡುವ ಭೀತಿ’ ವರದಿಯನ್ನಾಧರಿಸಿ ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ಕುಕ್ಕುಟೋದ್ಯಮದವರ ಸಭೆ ನಡೆಸಿ ಅವರು ಮಾತನಾಡಿದರು.

Advertisement

ಕೋಳಿ ತ್ಯಾಜ್ಯ ಮೂಟೆ ಕಟ್ಟಿ ತುಂಗಾ ನದಿಗೆ ಎಸೆಯುವುದು ಗಮನಕ್ಕೆ ಬಂದಿದೆ. ಇದು ಕಾನೂನಿಗೆ ವಿರುದ್ಧ. ಉದ್ಯಮ ನಡೆಸುವಾಗ ಕಾಯ್ದೆ- ಕಾನೂನುಗಳ ಪಾಲನೆ ಪ್ರತಿಯೊಬ್ಬರ ಕರ್ತವ್ಯ. ಅದನ್ನು ಮೀರಿ ನಡೆದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾಯ್ದೆಯನ್ವಯ ಪಂಚಾಯತ್‌ ಮುಖಾಂತರ ನಿಮ್ಮೆಲ್ಲರಿಗೊಂದು ಪ್ರತಿಯನ್ನು ಕೊಡುತ್ತೇವೆ. ಪಶುಪಾಲನಾ ಇಲಾಖೆ, ಕಂದಾಯ ಇಲಾಖೆ, ಸ್ಥಳೀಯ ಗ್ರಾಪಂನಿಂದ ಹಾಕಿರುವ ಶರತ್ತುಗಳಿಗೆ ನೀವು ಬದ್ಧರಾಗಿರಬೇಕು. ಅನೈತಿಕ, ಕಾನೂನು ಬಾಹಿರವಾಗಿ ಉದ್ಯಮ ನಡೆಸಬೇಡಿ. 15ದಿನಗಳ ಹಿಂದೆ ಮಾಂಸದಂಗಡಿಯವರನ್ನು ಕರೆದು ಮನವಿ ಮಾಡಿದ್ದೇವೆ. ಒಂದು ಕೆ.ಜಿ. ಮಾಂಸಕ್ಕೆ ಇಂತಿಷ್ಟೇ ಹಣ ಎಂದು ಬೆಲೆಯನ್ನು ನಿಗದಿಪಡಿಸಬೇಕು ಎಂದು ತಿಳಿಸಿದ್ದೆ. ಆದರೆ ಅದು ಯಾವುದೂ ಪಾಲನೆಯಾಗುತ್ತಿಲ್ಲ ಎಂದರು.

ಸರ್ಕಲ್‌ ಇನ್ಸ್‌ಪೆಕ್ಟರ್‌ ಗಣೇಶಪ್ಪ ಮಾತನಾಡಿದರು. ಸಭೆಯಲ್ಲಿ ಪಪಂ ಮುಖ್ಯಾಧಿಕಾರಿ ಸಿ. ಡಿ. ನಾಗೇಂದ್ರಕುಮಾರ್‌, ತಾಪಂ ಕಾರ್ಯ ನಿರ್ವಹಣಾಧಿಕಾರಿ ಆಶಾಲತಾ, ತಾಲೂಕು ಆರೋಗ್ಯಾಧಿಕಾರಿ ಅಶೋಕ್‌, ಕಂದಾಯಾಧಿಕಾರಿ ಮಂಜುನಾಥ್‌, ಪಪಂ ಆರೋಗ್ಯಾಧಿಕಾರಿ ರಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next