Advertisement

ಟಿಪ್ಪು ಸುಲ್ತಾನ್ ಪಠ್ಯ ತೆಗೆಯುವ ವಿಚಾರದಲ್ಲಿ ಗೊಂದಲಗಳಿಲ್ಲ: ವರದಿ ಬಂದ ಬಳಿಕ ಸೂಕ್ತ ಕ್ರಮ

10:13 AM Nov 01, 2019 | Mithun PG |

ಬೆಂಗಳೂರು: ಪಠ್ಯಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಸಂಬಂಧಿತ ಇತಿಹಾಸದ ಅಧ್ಯಾಯಗಳನ್ನು ಕೈ ಬಿಡುವ ವಿಚಾರದಲ್ಲಿ ಯಾವುದೇ ಗೊಂದಲಗಳಿಲಿಲ್ಲ . ಆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಒಂದು ಸಮಿತಿ ಮಾಡಲಾಗಿದೆ. ಸಮಿತಿ ವರದಿ ಬಂದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

Advertisement

ಡಾಲರ್ಸ್ ಕಾಲೋನಿ‌ ನಿವಾಸದಲ್ಲಿ ಈ ಕುರಿತು ಮಾತನಾಡಿದ ಅವರು ಟಿಪ್ಪು ಸುಲ್ತಾನ್ ಪಠ್ಯ ತೆಗೆಯುವ ವಿಚಾರದಲ್ಲಿ  ಗೊಂದಲಗಳಿಲ್ಲ. ಟಿಪ್ಪು ಸುಲ್ತಾನ್ ಸಂಬಂಧ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ

ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಅಂತ ಈಗಾಗಲೇ ನಿರ್ಧರಿಸಲಾಗಿದೆ . ತಾಲ್ಲೂಕಿಗೆ ಒಂದು ಕಾಲೇಜು ಕೊಡಕ್ಕಾಗುತ್ತಾ ?. ಇದರ ಬಗ್ಗೆ ನಾನು ಡಿ.ಕೆ ಶಿವಕುಮಾರ್ ಜೊತೆ ಮಾತಾಡುತ್ತೇನೆ ಎಂದು ಹೇಳಿದರು.

ನೆರೆ ಸಂತ್ರಸ್ಥರ ನೆಮ್ಮದಿಗೆ ಸರ್ಕಾರ ನಿರಂತರ ಶ್ರಮ ಪಡುತ್ತಿದೆ. ಇವತ್ತಿನ ಎಲ್ಲ ಪತ್ರಿಕೆಗಳಲ್ಲಿ ಈ ಕುರಿತು ವಿವರವಾಗಿ ಜಾಹೀರಾತು ಕೊಡಲಾಗಿದೆ. ನೆರೆ ಪರಿಹಾರ ಕುರಿತು ಸಿದ್ದರಾಮಯ್ಯ ಆರೋಪ ವ್ಯಥಾ ಆರೋಪ ಮಾಡುತ್ತಿದ್ದಾರೆ. ಸರ್ಕಾರ ಸತ್ತು ಹೋಗಿದೆ, ನೆರೆ ಪರಿಹಾರ ಏನೂ ಮಾಡಿಲ್ಲ ಎಂಬುದು ಸತ್ಯಕ್ಕೆ ದೂರವಾದುದು . ಈಗಾಗಲೇ ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್ ಬಂದಾಗಲೂ ನೆರೆ ಸ್ಥಿತಿಗತಿ‌ ಬಗ್ಗೆ  ತಿಳಿಸಿದ್ದೇನೆ.ಕೇಂದ್ರ  ಇನ್ನಷ್ಟು ಸಹಕಾರ ಕೊಟ್ರೆ ಪರಿಹಾರ ಕಾರ್ಯ ಇನ್ನಷ್ಟು ವೇಗವಾಗಿ ಮಾಡಬಹುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next