Advertisement

ಟಿಪ್ಪು ಜಯಂತಿ: ರಸ್ತೆಗಿಳಿದು ಪ್ರತಿಭಟನೆ

07:15 AM Oct 23, 2017 | Team Udayavani |

ಹುಮನಾಬಾದ: “ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಿದರೆ ರಸ್ತೆಗಿಳಿದು ಪ್ರತಿಭಟಿಸುವುದಾಗಿ’ ವಿಧಾನಸಭೆ
ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಕಳೆದ ವರ್ಷ ವಿಧಾನ ಮಂಡಲದಲ್ಲಿ ವಿರೋಧ ವ್ಯಕ್ತಪಡಿಸಲಾಗಿತ್ತು. ಟಿಪ್ಪು ಇತಿಹಾಸ ಕುರಿತು ಅನೇಕ ಚರ್ಚೆಗಳು ನಡೆದಿವೆ. ಅಲ್ಲದೇ ಜಯಂತಿ ಆಚರಿಸುವ ನಿಟ್ಟಿನಲ್ಲಿ ಯಾರೂ ಕೂಡ ಸರ್ಕಾರಕ್ಕೆ ಅರ್ಜಿ ನೀಡಿಲ್ಲ. ಮುಖ್ಯಮಂತ್ರಿಗಳೇ ಜಯಂತಿ ಆಚರಿಸುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ’ ಎಂದರು.

“ಕಾನೂನು ಸುವ್ಯವಸ್ಥೆ ಹಾಳು ಮಾಡಿ ಜಯಂತಿ ಆಚರಿಸುವುದು ಬೇಡ. ಕಳೆದ ವರ್ಷ ನಡೆದ ಹಿಂಸಾಚಾರದಲ್ಲಿ ವ್ಯಕ್ತಿಯೊಬ್ಬರ ಕೊಲೆಯಾಗಿತ್ತು. ಟಿಪ್ಪು ಇತಿಹಾಸ ತಿಳಿಯಬೇಕಾದರೆ ಕೊಡಗಿನ ಜನ ಹಾಗೂ ಚಿತ್ರದುರ್ಗದ ನಾಯಕ ಸಮುದಾಯದ ಜನರನ್ನು ಕೇಳಿ ಇತಿಹಾಸ ತಿಳಿದುಕೊಳ್ಳಲಿ. ಮೊಂಡುತನದಿಂದ ಜಯಂತಿ ಆಚರಿಸಿದರೆ ಮುಂದೆ ನಡೆಯುವ ಅನಾಹುತಗಳಿಗೆ ಸರ್ಕಾರವೇ ಹೊಣೆ’ ಎಂದು ಎಚ್ಚರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next