Advertisement

ಟಿಪ್ಪು ಜಯಂತಿ ಆಚರಿಸಿದರೆ ಗಲಭೆ :ಈಶ್ವರಪ್ಪ

07:40 AM Oct 29, 2017 | Team Udayavani |

ಕೊಪ್ಪಳ: “ರಾಜ್ಯ ಸರ್ಕಾರ ಟಿಪ್ಪು ಜಯಂತಿ ನಡೆಸಿದರೆ ರಾಜ್ಯಾದ್ಯಂತ ಗಲಭೆ ನಡೆಯುತ್ತದೆ. ಸರ್ಕಾರ ಇದನ್ನರಿತು ಆಚರಣೆ ಕೈ ಬಿಡಬೇಕು’ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರಾಜಕಾರಣ ಮಾಡಲು ರಾಷ್ಟ್ರಪತಿಗಳ
ಭಾಷಣವನ್ನೂ ದುರುಪಯೋಗ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಗೂಂಡಾ ಸರ್ಕಾರವಿದೆ. ಸಿದ್ದರಾಮಯ್ಯ ಭಂಡತನಕ್ಕಿಳಿದು, ಕಾನೂನಿಗೂ ಬೆಲೆ ಕೊಡುತ್ತಿಲ್ಲ. ಕೋರ್ಟ್‌ ಆದೇಶಕ್ಕೂ ಬೆಲೆ ಕೊಡುತ್ತಿಲ್ಲ. ಸಚಿವ ಎಂ.ಬಿ.ಪಾಟೀಲ ಅವರು ನೀರಾವರಿ ಇಲಾಖೆ ಕೆಲಸ ಬಿಟ್ಟು ಜಾತಿ-ಧರ್ಮದ ಮಧ್ಯೆ ಜಗಳ ಹಚ್ಚಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next