Advertisement

ಟಿಪ್ಪು ಜಯಂತಿ ರದ್ದತಿಯ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ

02:21 PM Aug 03, 2019 | Team Udayavani |

ರಾಮನಗರ: ಟಿಪ್ಪು ಜಯಂತಿ ಆಚರಣೆಯನ್ನು ರದ್ದುಪಡಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನಗರದಲ್ಲಿ ಕಪ್ಪು ಬಾವುಟ ಪ್ರದರ್ಶಸಿ ಪ್ರತಿಭಟಿಸಿದರು.

Advertisement

ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ತಮ್ಮ ಸಂಘಟನೆಯ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದ ಅವರು, ಟಿಪ್ಪು ಜಯಂತಿಯನ್ನು ರದು ್ದಮಾಡಿ ರಾಜ್ಯ ಸರ್ಕಾರ ಅಪಚಾರವೆಸಗಿದೆ. ಸರ್ಕಾರ ತನ್ನ ಸಣ್ಣ ತನ ತೋರದೆ ತಕ್ಷಣ ತನ್ನ ಆದೇಶವನ್ನು ಹಿಂಪಡೆಯಬೇಕು. ಸರ್ಕಾರದಿಂದಲೇ ಟಿಪ್ಪು ಜಯಂತಿಯನ್ನು ಆಚರಿಸಬೇಕು ಎಂದರು.

ಟಿಪ್ಪು ಸುಲ್ತಾನ ತನ್ನ ಆಳ್ವಿಕೆಯಲ್ಲಿ ಶ್ರೀರಂಗ ಪಟ್ಟಣದ ದೇವಾಲಯ, ಶೃಂಗೇರಿಯ ದೇಗುಲಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ರೇಷ್ಮೆ ಕೃಷಿಯನ್ನು ಪರಿಚಯಿಸಿದ್ದು ಸಹ ಆತನೆ. ಅಲ್ಲದೆ, ಆಂಗ್ಲರ ವಿರುದ್ಧ ಹೋರಾಡಿದ್ದ. ಇತಿಹಾಸದ ಪುಟಗಳಲ್ಲಿ ಇವೆಲ್ಲ ದಾಖಲಾಗಿದೆ. ದೇಶ ಕಂಡ ಅಪ್ರತಿಮ ವೀರನ ಜಯಂತಿ ಆಚರಣೆಯನ್ನು ಸರ್ಕಾರ ಕೈ ಬಿಟ್ಟಿದ್ದು ತಪ್ಪು, ತಕ್ಷಣ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.

ಪಾರ್ಲಿಮೆಂಟ್‌ನ ಆವರಣದಲ್ಲಿ ಟಿಪ್ಪು ಪ್ರತಿಮೆ ಸ್ಥಾಪಿಸಿ: ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಮತ್ತು ಹಾಲಿ ರಾಷ್ಟ್ರಪತಿ ಕೋವಿಂದ್‌ ಸಹ ಟಿಪ್ಪು ಸುಲ್ತಾನನ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ಟಿಪ್ಪು ಒಂದು ಸಮುದಾಯದ ವ್ಯಕ್ತಿಯಲ್ಲ, ಆತ ಇಡೀ ದೇಶದ ಆಸ್ತಿ. ಹೀಗಾಗಿ ಟಿಪ್ಪು ಸುಲ್ತಾನನ ಪ್ರತಿಮೆಯನ್ನು ದೆಹಲಿಯ ಪಾರ್ಲಿಮೆಂಟ್ ಭವನದ ಆವರಣದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಟಿಪ್ಪು ಸ್ಮರಣೆಯಲ್ಲಿ ದೇವನಹಳ್ಳಿ ಅಭಿವೃದ್ಧಿ: ಟಿಪ್ಪು ಸುಲ್ತಾನ ಜನಿಸಿದ ದೇವನಹಳ್ಳಿಯಲ್ಲಿ ಆತನ ಸ್ಮರಣೆಯಲ್ಲಿ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕು. ಉತ್ತಮ ಪ್ರವಾಸಿ ತಾಣವನ್ನಾಗಿ ರೂಪಿಸಬೇಕು. ಬೆಂಗಳೂರಿನಿಂದ ದೇವನಹಳ್ಳಿ ರಸ್ತೆಗೆ ಟಿಪು ಹೆಸರು ನಾಮಕರಣ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

Advertisement

ತಮಗಿಷ್ಟ ಬಂದಹಾಗೆ ಆಡಳಿತ: 5 ವರ್ಷ ಆಡಳಿತ ಕೊಡುವ ಮುಖ್ಯಮಂತ್ರಿಗಳು ಅಧಿಕಾರ ಹಿಡಿಯಬೇಕು. ಆದರೆ, ಈಗ 3 ತಿಂಗಳಿಗೊಮ್ಮೆ ಹೊಸ ಮುಖ್ಯಮಂತ್ರಿ ಬರುವಂತಾಗಿದೆ. ಪ್ರತಿಭಾರಿ ಮುಖ್ಯಮಂತ್ರಿಗಳು ಬದಲಾದರೆ ಹಿಂದಿನ ಸಿಎಂ ಆದೇಶಗಳನ್ನೆಲ್ಲ ಬದಲಾಯಿಸಲಾಗುತ್ತಿದೆ. ಟಿಪು ಜಯಂತಿ ವಿಚಾರದಲ್ಲಿ ಆಗಿದ್ದು ಇದೆ. ಪ್ರತಿ ಮುಖ್ಯಮಂತ್ರಿಯೂ ತನಗಿಷ್ಟ ಬಂದಹಾಗೆ ಆಡಳಿತ ನಡೆಸುತ್ತಿದ್ದಾರೆ. ಜಯಂತಿ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ಸು ಪಡೆದು ಆತನ ಜಯಂತಿಯನ್ನು ವೈಭವವಾಗಿ ಆಚರಿಸದಿದ್ದರೆ, ತಮ್ಮ ಸಂಘಟನೆಯವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಇದೇ ಭಾನುವಾರ ಟಿಪ್ಪು ಸುಲ್ತಾನನ ಸಮಾಧಿಯ ಬಳಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ತಮಿಳುನಾಡಿಗೆ ನೀರು ಕೊಡಬೇಡಿ: ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರಿದಿದೆ. ಬೆಂಗಳೂರು, ರಾಮನಗರ, ಚಾಮರಾಜನಗರ ಹೀಗೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಪರದಾಟ ಇದೆ. 20 ದಿನಗಳಿಗೊಮ್ಮೆ ನೀರು ಪೂರೈಸುವ ಪರಿಸ್ಥಿತಿ ಇದೆ. ಕಾವೇರಿ ಕಣಿವೆಯಲ್ಲಿ ಕೆರೆ, ಕಟ್ಟೆಗಳು ಒಣಗಿವೆ. ಕೃಷಿಗೆ ನಿರಿಲ್ಲದಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬಾರದು. ರಾಜ್ಯ ಸರ್ಕಾರ ಇಲ್ಲಿನ ಗಂಭೀರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ: ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಲ ಸಚಿವರು ಸಹ ಮೇಕೆದಾಟು ಯೋಜನೆ ವಿಚಾರವನ್ನು ಮರೆತರು. ರಾಜ್ಯ ಸರ್ಕಾರದ ಗಮನ ಸೆಳೆಯಲು ತಾವು ಮುಂದಿನ ವಾರ ಮೇಕೆದಾಟಿನಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರೆವೇರಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next