Advertisement

Kundapura; ಹಿಂದಕ್ಕೆ ಚಲಿಸಿದ ಟಿಪ್ಪರ್‌: ವ್ಯಕ್ತಿ ಸಾವು

09:49 PM Mar 02, 2024 | Team Udayavani |

ಕುಂದಾಪುರ: ಮನೆಯ ಕೆಲಸಕ್ಕೆ ಮರಳು ತಂದಿದ್ದ ಟಿಪ್ಪರ್‌ ಒಮ್ಮಿಂದೊಮ್ಮೆಲೇ ಹಿಂದಕ್ಕೆ ಚಲಿಸಿದ ಪರಿಣಾಮ ಅಲ್ಲಿ ನಿಂತಿದ್ದ ಕಾಳಾವರದ ನಿವಾಸಿ ದಿ| ರಾಮಕೃಷ್ಣ ಆಚಾರ್ಯ ಅವರ ಪುತ್ರ ರಾಘವೇಂದ್ರ ಆಚಾರ್ಯ (43) ಸಾವನ್ನಪ್ಪಿದ ಘಟನೆ ಕಾಳಾವರದಲ್ಲಿ ಶುಕ್ರವಾರ ಸಂಭವಿಸಿದೆ.

Advertisement

ರಾಘವೇಂದ್ರ ಆಚಾರ್ಯ ಅವರು ತಮ್ಮ ಮನೆಯ ಬಾವಿಯ ಆವರಣ ಗೋಡೆ ಕಟ್ಟಲೆಂದು ತರಿಸಿದ್ದ ಮರಳನ್ನು ಟಿಪ್ಪರ್‌ನಿಂದ ಇಳಿಸುವ ಸಲುವಾಗಿ ಹಿಂದಕ್ಕೆ ಬರುವಂತೆ ಸೂಚಿಸುತ್ತಿದ್ದರು. ಈ ವೇಳೆ ಟಿಪ್ಪರ್‌ ಚಾಲಕನ ನಿಯಂತ್ರಣಕ್ಕೆ ಬಾರದೆ ಒಮ್ಮೆಲೇ ವೇಗವಾಗಿ ಹಿಂದಕ್ಕೆ ಬಂದು, ನಿಂತಿದ್ದ ರಾಘವೇಂದ್ರ ಆಚಾರ್ಯ ಅವರಿಗೆ ಢಿಕ್ಕಿ ಹೊಡೆದು, ಗೇಟಿನ ಪಿಲ್ಲರ್‌ಗೆ ಗುದ್ದಿದೆ. ಟಿಪ್ಪರ್‌ ಹಾಗೂ ಗೇಟಿನ ಪಿಲ್ಲರ್‌ ನಡುವೆ ಸಿಕ್ಕಿ ಹಾಕಿಕೊಂಡು ಗಂಭೀರ ಗಾಯಗೊಂಡ ರಾಘವೇಂದ್ರ ಅವರನ್ನು ಕೂಡಲೇ ಕೋಟೇಶ್ವರದ ಆಸ್ಪತ್ರೆಗೆ ಕೊಂಡೊಯ್ದರೂ, ಅದಾಗಲೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೃತರ ತಾಯಿ ರಾಜೀವಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next