Advertisement

ಜಮ್ಮುವಿನಲ್ಲಿ ಇಂಜೆಸ್ಟಿಸ್ ಮುಗಿದ ಅಧ್ಯಾಯ – ಅಮಿತ್ ಶಾ

05:33 PM Oct 24, 2021 | Team Udayavani |

ಜಮ್ಮು:”ಜಮ್ಮುವಿನ ಜನರಿಗೆ ಅನ್ಯಾಯದ ಸಮಯ ಮುಗಿದಿದೆ, ಈಗ ಯಾರೂ ನಿಮಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.

Advertisement

ಜಮ್ಮುವಿನಲ್ಲಿ ಐಐಟಿ ಉದ್ಘಾಟನಾ ಸಮಾರಂಭದ ನಂತರ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಜಮ್ಮುವಿನ ಜನರಿಗೆ ಅನ್ಯಾಯದ ಸಮಯ ಮುಗಿದಿದೆ ಎಂದು ಹೇಳಲು ನಾನು ಇಂದು ಜಮ್ಮುವಿಗೆ ಬಂದಿದ್ದೇನೆ. ಈಗ ಯಾರೂ ನಿಮಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ. ಕೆಲವರು ಈಗಲೂ ಅಭಿವೃದ್ಧಿಗೆ ಅಡ್ಡಿ ಪಡಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅಭಿವೃದ್ಧಿಯ ಯುಗವನ್ನು ಯಾರೂ ತಡೆಯಲು ಸಾಧ್ಯವಾಗುವುದಿಲ್ಲ ಎಂದು ನಿಮಗೆ ಭರವಸೆ ನೀಡಲು ಬಯಸುತ್ತೇನೆ.” ಎಂದು ತಿಳಿಸಿದರು.
ಇದನ್ನೂ ಓದಿ:- ಗೋವಾ ಸರ್ಕಾರ ಕೇಂದ್ರದ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ: ಪ್ರಧಾನಿ ಮೋದಿ

ಪ್ರೇಮ್ ನಾಥ್ ಡೋಗ್ರಾ ಅವರ ಜನ್ಮ ವಾರ್ಷಿಕೋತ್ಸವವನ್ನು ಶಾ ಅವರನ್ನು ನೆನಪಿಸಿಕೊಂಡರು. “ಇಂದು ಪ್ರೇಮ್ ನಾಥ್ ಡೋಗ್ರಾ ಅವರ ಜನ್ಮ ದಿನಾಚರಣೆ. ಭಾರತದ ಜನರು ಅವರನ್ನು ಮರೆಯಲು ಸಾಧ್ಯವಿಲ್ಲ. ಅವರು ಶ್ಯಾಮ ಪ್ರಸಾದ್ ಮುಖರ್ಜಿ ಜೊತೆಗೆ ಒಂದು ದೇಶದಲ್ಲಿ ಎರಡು ವಿಧಾನ, ಎರಡು ನಿಶಾನ್, ಎರಡು ಪ್ರಧಾನ್ ಕೆಲಸ ಮಾಡುವುದಿಲ್ಲ” ಎಂದು ಘೋಷಣೆ ನೀಡಿದ್ದರು ಎಂಬುದನ್ನು ಸ್ಮರಿಸಿಕೊಂಡರು.

ಜಮ್ಮು ಮತ್ತು ಕಾಶ್ಮೀರದ ತನ್ನ ಮೂರು ದಿನಗಳ ಪ್ರವಾಸದಲ್ಲಿ ಎರಡನೇ ದಿನವಾದ ಇಂದು ಕೇಂದ್ರ ಗೃಹ ಸಚಿವರು ಐಐಟಿ ಜಮ್ಮು ಕ್ಯಾಂಪಸ್‌ನ ಮೂರು ಹಂತಗಳನ್ನು ಅನಾವರಣಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next