Advertisement

ಕು.ಲಲಿತಾ ಅನಪೂರಗೆ BJP ಟಿಕೆಟ್; ಚಿಂಚನಸೂರ ಅವರಿಗೆ ಶಾಕ್

11:48 PM Apr 12, 2023 | Team Udayavani |

ಯಾದಗಿರಿ : ಬಹು ನಿರೀಕ್ಷಿತ ಬಿಜೆಪಿ 2ನೇ ಪಟ್ಟಿ ಬಿಡುಗಡೆಗೊಂಡಿದ್ದು ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಕು. ಲಲಿತಾ ಅನಪೂರಗೆ ಗುರುಮಠಕಲ್ ಟಿಕೆಟ್ ನೀಡುವ ಮುಖಾಂತರ ಬಿಜೆಪಿ ಹೈಕಮಾಂಡ್  ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿರುವ ಬಾಬು ರಾವ್  ಚಿಂಚನಸೂರ ಗೆ ಶಾಕ್ ನೀಡಿದೆ.

Advertisement

ಹಿಂದುಳಿದ ಕಬ್ಬಲಿಗ ಸಮುದಾಯದ ಅತ್ಯಂತ ಪ್ರಭಾವಿ ಮಹಿಳೆಯಾಗಿರುವ ಲಲಿತಾ ಅನಪೂರ ಅವರು ಸದ್ಯ ಯಾದಗಿರಿ ನಗರಸಭೆ ಸದಸ್ಯರಾಗಿದ್ದಾರೆ.

ಇದನ್ನೂ ಓದಿ : BJP 23 ಅಭ್ಯರ್ಥಿಗಳ ಎರಡನೇ ಪಟ್ಟಿ ರಿಲೀಸ್; ಯಾವ ಕ್ಷೇತ್ರಕ್ಕೆ ಯಾರು?

ಗುರುಮಠಕಲ್ ಕ್ಷೇತ್ರದಲ್ಲಿ ಕಬ್ಬಲಿಗ ಸಮುದಾಯದ ಹೆಚ್ಚಿನ ಮತಗಳು ಇರುವುದನ್ನು ಮನಗಂಡ ಬಿಜೆಪಿ ಹೈಕಮಾಂಡ್ ಕು. ಲಲಿತಾ ಅನಪೂರರವರಿಗೆ ಟಿಕೆಟ್ ನೀಡಿದ್ದು ಗುರುಮಠಕಲ್ ಕ್ಷೇತ್ರದಲ್ಲಿ ಒಳ್ಳೆಯ ಪೈಪೋಟಿ ನೀಡಲಿದ್ದಾರೆ ಎನ್ನುವುದು ರಾಜಕೀಯ ಲೆಕ್ಕಾಚಾರವಾಗಿದೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದಲ್ಲಿ ಮೂರು ಪ್ರಭಾವಿಗಳು ಸ್ಪರ್ಧೆಯಲ್ಲಿ ಇರುವುದರಿಂದ ತ್ರಿಕೋನ ಸ್ಪರ್ಧೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next