Advertisement

ಯಾದಗಿರಿ : ಕುರಿ ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಯುವಕ ಗಂಭೀರ

08:35 PM May 08, 2021 | Team Udayavani |

ಯಾದಗಿರಿ: ಸಿಡಿಲು ಬಡಿದು ಯುವಕನೊಬ್ಬ ಸಾವು ಬದುಕಿನ ಮದ್ಯೆ ಹೋರಾಟ ಮಾಡುತ್ತಿರುವ ಘಟನೆ ಶನಿವಾರ ನಡೆದಿದೆ.

Advertisement

ಯಾದಗಿರಿ ತಾಲೂಕಿನ ಬಾಚವಾರ ಗ್ರಾಮದಲ್ಲಿ ಸಂಜೆ ೪:೩೦ರ ಸುಮಾರಿಗೆ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಗುಡುಗು ಸಹಿತ ಮಳೆಯಾಗಿದ್ದು ಈ ವೇಳೆ ಜಮೀನಿನಲ್ಲಿ ಸಿಡಿಲು ಬಿದ್ದಿದ್ದು ಕುರಿ ಮೇಯಿಸುತ್ತಿದ್ದ ಉಪೇಂದ್ರ (೨೦) ಸಿಡಿಲಿನ ಶಾಖಕ್ಕೆ ಅಸ್ವಸ್ಥಗೊಂಡು ಮಾತು ನಿಲ್ಲಿಸಿದ್ದು ಸದ್ಯ ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದಾನೆ. ಗ್ರಾಮಸ್ಥರು ಯುವಕನನ್ನು ಹೆಗಲೆ ಮೇಲೆ ಹೊತ್ತು ಕೊಂಡು ಕೆಲ ದೂರ ಸಾಗಿಸಿ ಬಳಿಕ ಯಾದಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಸಿಡಿಲು ಬಡಿದು ಎತ್ತು ಸಾವು :
ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದ ಮಲ್ಲೇಶಪ್ಪ ನಿಂಗಪ್ಪ ಎಂಬ ರೈತನಿಗೆ ಸೇರಿದ ಎತ್ತು ಹೊಲದಲ್ಲಿದ್ದ ವೇಳೆ ಸಿಡಿಲು ಬಡಿದು ಸಾವನಪ್ಪಿದೆ.

ಇದನ್ನೂ ಓದಿ :ಮೇ.10 ರಿಂದ ಕಠಿನ ಲಾಕ್‌ಡೌನ್‌ :ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ; ಉಡುಪಿ ಡಿಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next