Advertisement

Vijayapura: ಸಿಡಿಲು ಬಡಿದು ಕುರಿಗಾಯಿ ಸಹಿತ 20 ಮೇಕೆ ಸಾವು…

08:30 PM Jun 05, 2024 | Team Udayavani |

ವಿಜಯಪುರ : ಬುಧವಾರ ಸಂಜೆ ಜಿಲ್ಲೆಯಲ್ಲಿ ಸಿಡಿಲು ಬಡಿದು ಕುರಿಗಾರ ಹಾಗೂ 20 ಮೇಕೆ ಸಾವಿಗೀಡಾಗಿರುವ ಘಟನೆ ನಡೆದಿದೆ.

Advertisement

ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಪರಿಸರದಲ್ಲಿ ಮೇಕೆ ಮೇಯಿಸುತ್ತಿದ್ದಾಗ ಬುಧವಾರ ಸಂಜೆ 6-30 ರ ಸುಮಾರಿಗೆ ಸಿಡಿಲು ಬಡಿದು ಅಮೋಘಿ ಶಿವಣಗಿ ಎಂಬ 38 ವರ್ಷದ ಗುರಿಗಾಯಿ ಸಾವಿಗೀಡಾಗಿದ್ದಾನೆ. ಅಲ್ಲದೇ 20 ಮೇಕೆಗಳೂ ಸಿಡಿಲಿನ ಹೊಡೆತಕ್ಕೆ ಮೃತಪಟ್ಟಿವೆ.

ಸಿಡಿಲ ಅಬ್ಬರಕ್ಕೆ ಮೇಕೆಗಳ ಹಿಂಡು ನೆಲಕ್ಕುರುಳಿದ್ದು, ಮೇಕೆಗಳ ಮಧ್ಯೆಯೇ ಕುರಿಗಾಯಿಯೂ ಮೃತಪಟ್ಟಿದ್ದಾನೆ. ವಿಷಯ ತಿಳಿದು ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಇದನ್ನೂ ಓದಿ: ನಮ್ಮ ಗುಪ್ತಚರ ವರದಿ ಕೈಕೊಟ್ಟಿರುವುದಕ್ಕೆ ಕ್ಷೇತ್ರ ಕಳೆದುಕೊಂಡಿದ್ದೇವೆ: ಸತೀಶ್ ಜಾರಕಿಹೊಳಿ

Advertisement

Udayavani is now on Telegram. Click here to join our channel and stay updated with the latest news.

Next