Advertisement

ಖಾಲಿಯಾಗುತ್ತಿದೆ ತುಂಬೆ: 15 ದಿನಗಳಿಗಷ್ಟೇ ನೀರು

11:41 AM Mar 19, 2017 | Harsha Rao |

ಮಂಗಳೂರು: ಮಂಗಳೂರಿಗೆ ನೀರು ಪೂರೈಕೆಯಾಗುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಇದರಿಂದ ಮಹಾ ನಗರಕ್ಕೆ ನೀರು ಕೊರತೆಯಾಗುವ ಆತಂಕ ಎದುರಾಗಿದೆ. ಶನಿವಾರ ನೀರಿನ ಮಟ್ಟ 4 ಅಡಿಗೆ ಇಳಿದಿದ್ದು, ಪ್ರಸ್ತುತ ತುಂಬೆಯಲ್ಲಿರುವ ನೀರು ಸುಮಾರು 10ರಿಂದ 15 ದಿನಗಳ ವರೆಗೆ ಸಾಕಾಗ ಬಹುದು ಎಂದು ಮೇಯರ್‌ ಕವಿತಾ ಸನಿಲ್‌ ತಿಳಿಸಿದ್ದಾರೆ. 

Advertisement

ಜಿಲ್ಲಾಧಿಕಾರಿಗೆ ಮನವಿ
ತುಂಬೆಯಲ್ಲಿ ನೀರಿನ ಕೊರತೆ ಇರುವುದರಿಂದ ಹೆಚ್ಚಿನ ನೀರಿನ ಪೂರೈಕೆಗೆ ಎಎಂಆರ್‌ ಡ್ಯಾಂನಿಂದ ನೀರು ಬಿಡುವಂತೆ ಸೂಚನೆ ನೀಡಲು ಪಾಲಿಕೆ ಅಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಪ್ರಕ್ರಿಯೆ ನಡೆದಿದೆ. 

ಜನರಿಗೆ ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಎಎಂಆರ್‌ ಡ್ಯಾಂನಿಂದ ನೀರು ಪೂರೈಕೆ ಮಾಡಲು ಆದೇಶ ನೀಡುವಂತೆ ಪಾಲಿಕೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಮೇಯರ್‌ ಕವಿತಾ ಸನಿಲ್‌ ತಿಳಿಸಿದ್ದಾರೆ.

ಎಎಂಆರ್‌ ಮತ್ತು ನೆಕ್ಕಿಲಾಡಿ ಕಿಂಡಿ ಅಣೆಕಟ್ಟಿನ ನೀರು ಲಭ್ಯ ವಾದರೂ ಮೇ ಅಂತ್ಯದವರೆಗೆ ಸಮರ್ಪಕವಾಗಿ ನೀರು ಪೂರೈಸುವುದು ಕಷ್ಟ. ಈಗಾಗಲೇ ನಗರಕ್ಕೆ ರೇಶ ನಿಂಗ್‌ ಮೂಲಕ ನೀರು ಬಿಡುಗಡೆ ಮಾಡಲಾಗುತ್ತಿದೆ. ಮಳೆ ಬಾರದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next