Advertisement

ಸಿದ್ಧಗಂಗಾ ಮಠ ನಿಸ್ವಾರ್ಥ ಕಾರ್ಯ: ಅಮಿತ್‌ ಶಾ

08:15 PM Apr 02, 2022 | Team Udayavani |

ತುಮಕೂರು: ನಾನು ಮೂರನೇ ಬಾರಿಗೆ ಶ್ರೀಮಠಕ್ಕೆಬರುತ್ತಿದ್ದೇನೆ. ಪ್ರತಿ ಸಾರಿ ಬಂದಾಗಲೂ ಮಾನವಜೀವನದ ಅತ್ಯಂತ ಉತ್ಕೃಷ್ಟ ಆದರ್ಶಗಳನ್ನುಕಲಿತುಕೊಂಡು ಹೋಗಿದ್ದೇನೆ. ಇಡೀ ದೇಶದಲ್ಲಿ ರಾಮ,ಕೃಷ್ಣ ಮತ್ತು ಇತರೆ ಸ್ವಾಮೀಜಿಗಳ ಹೆಸರಿನ ಅನೇಕಮಠಗಳು ಸ್ಥಾಪನೆಯಾಗಿವೆ.

Advertisement

ಆದರೆ, ಎಲ್ಲಮಠಗಳಿಗಿಂತ ಸಿದ್ಧಗಂಗಾ ಮಠ ನಿಸ್ವಾರ್ಥ ಕಾರ್ಯಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿರಾಷ್ಟ್ರೀಯ ನಾಯಕ ಅಮಿತ್‌ ಶಾ ಹೇಳಿ ದರು.ಬೇಡಿ ಬರುತ್ತಿರುವ ಭಕ್ತರ ಇಷ್ಟಾರ್ಥ ಸಿದ್ಧಿಸುವದೇವರಾಗಿರುವ ಕರ್ನಾಟಕ ರತ್ನ ಡಾ.ಶಿ ವ ಕು ಮಾರಸ್ವಾಮೀ ಜಿ ಯ ವರ 115ನೇ ಜಯಂತ್ಯು ತ್ಸವ ಹಿನ್ನೆಲೆ ಶ್ರೀಗಳಗದ್ದುಗೆಗೆ ಶುಕ್ರ ವಾರ ವಿಶೇಷ ಪೂಜೆ ಸಲ್ಲಿಸಿ ಮಾತ ನಾ ಡಿದರು.

ಶೈಕ್ಷಣಿಕ ನಗರಕ್ಕೆ ಹೆಲಿಕಾಪ್ಟರ್‌ ಮೂಲಕ ಆಗಮಿಸಿತುಮಕೂರು ವಿಶ್ವ ವಿದ್ಯಾನಿಲಯ ಹೆಲಿಪ್ಯಾಡ್‌ನಿಂದಹೊರ ಬರುತ್ತಿದ್ದಂತೆ ವಿವಿ ಮುಂಭಾಗದಿಂದ ಮಠದವರೆಗೆ ರಸ್ತೆಯ ಎರಡೂ ಬದಿ ಸಾವಿರಾರು ಸಂಖ್ಯೆಯಲ್ಲಿಬಿಜೆಪಿ ಕಾರ್ಯಕರ್ತರು ಮತ್ತು ನಾಗರಿಕರು ಸೇರಿಹೂಮಳೆ ಭವ್ಯ ಸ್ವಾಗತ ಕೋರಿದರು.ನಂತರ ಶ್ರೀ ಮಠಕ್ಕೆ ಆಗಮಿಸಿದ ಅಮಿತ್‌ ಶಾ ಅವರನ್ನುಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟ ಪೂರ್ವಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸ್ವಾಗತಸಮಿತಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಕೇಂದ್ರಹಾಗೂ ರಾಜ್ಯದ ಸಚಿವರು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next