Advertisement

ಸ್ಲಂ ಮಕ್ಕಳಿಗೆ ಬಾಲ್ಯ ವಿವಾಹ ವಿರೋಧಿಸುವ ಜಾಗೃತಿ ಅಗತ್ಯ

07:28 PM Jul 22, 2021 | Team Udayavani |

ತುಮಕೂರು: ಇತ್ತೀಚಿನ ದಿನಗಳಲ್ಲಿ ಸ್ಲಂಮಕ್ಕಳಲ್ಲಿ ಶೈಕ್ಷಣಿಕ ಮಟ್ಟ ಕುಂದುತ್ತಿರುವುದರಿಂದ ಚಿಕ್ಕವಯಸ್ಸಿಗೆ ಬಾಲ್ಯ ವಿವಾಹವಾಗುವಘಟನೆಗಳು ಸ್ಲಂಗಳಲ್ಲಿ ಹೆಚ್ಚಾಗುತ್ತಿದ್ದು, ಈಗಾಗಲೇ ಹಲವಾರು ಬಾಲ್ಯವಿವಾಹಗಳನ್ನುಸಂಘಟನೆಯಿಂದ ತಡೆದಿದೆ.

Advertisement

ಆದರೂ, ಕಣ್‌ತಪ್ಪಿಸಿ ಪೋಷಕರು ಬಾಲ್ಯ ವಿವಾಹ ಮಾಡುತ್ತಿದ್ದು, ಇದು ಕಾನೂನು ಬಾಹಿರವಾಗಿದ್ದುಮುಂದಿನ ದಿನಗಳಲ್ಲಿ ಸ್ಲಂ ಮಕ್ಕಳಿಗೆ ಮತ್ತುಪೋಷಕರಿಗೆ ಬಾಲ್ಯ ವಿವಾಹ ವಿರೋಧಿಸಲುಜಾಗೃತಿ ಅಭಿಯಾನ ಕೈಗೊÙಲಾಗ ‌Û ‌ುವುದುಎಂದು ಸ್ಲಂ ಜನಾಂದೋಲನ ಕರ್ನಾ ಟಕಸಂಚಾಲಕ ಎ.ನರಸಿಂಹಮೂರ್ತಿ ತಿಳಿಸಿದರು.ಜಿಲ್ಲಾಕೊಳಗೇರಿ ನಿವಾಸಿಗಳ ಹಿತರಕ್ಷಣಾಸಮಿತಿಯಿಂದ ನಗರವಂಚಿತ ಯುವ ಜನಸಂಪನ್ಮೂಲ ಕೇಂದ್ರದಲ್ಲಿ ಚಿಂದಿ ಆಯುವಅಲೆಮಾರಿ ಮತ್ತು ಪರಿಶಿಷ್ಟ ಜಾತಿಯಸಮುದಾಯಗಳಿಗೆ ಬಾಲ್ಯ ವಿವಾಹ ಮತ್ತುಮಕ್ಕಳ ಶೈಕ್ಷಣೀಕ ಜಾಗೃತಿ ಶಿಬಿರ ಹಾಗೂಕೋವಿಡ್‌ಸಂಕಷ್ಟದಲ್ಲಿರುವಕುಟುಂಬಗಳಿಗೆಆಹಾರಕಿಟ್‌ಗಳ ವಿತರಣೆ ಮಾಡಿ ಮಾತನಾಡಿದ ಅವರು, ಅಲೆಮಾರಿ ಸಮುದಾಯಗಳಲ್ಲಿ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹಿಸುತ್ತಿದ್ದು,ಜಿಲ್ಲಾಡಳಿತ ಇಂತಹ ಸಮುದಾಯ ಗುರುತಿಸಿಅರಿವು ಮೂಡಿಸುವ ಅಗತ್ಯವಿದೆ ಎಂದರು.

ಅಭಿವೃದ್ಧಿಗೆ ಪ್ರೇರಣೆ: ಕೆಲವು ಮಕ್ಕಳು ಸ್ಲಂಮಕ್ಕಳು ಡ್ರಗ್ಸ್‌ ಜಾಲಕ್ಕೆ ಸಿಲುಕಿಸುತ್ತಿದ್ದು, ಈದುಶ್ಚಟಗಳಿಂದ ನಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಶೈಕ್ಷಣಿಕವಾಗಿ ಮಕ್ಕಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಶಿಕ್ಷಣದಿಂದ ಜ್ಞಾನಾರ್ಜನೆಯಾಗಿ ನಮ್ಮ ಸುತ್ತಲಿನ ಕಂದಾಚಾರ,ತಾರತಮ್ಯ, ಅಸಮಾನತೆ ಹಾಗೂ ಸಮುದಾಯದ ಅಭಿವೃದ್ಧಿಗೆ ಪ್ರೇರಣೆಯಾಗುತ್ತದೆಎಂದರು. ಪೋಷಕರ ಪ್ರತಿನಿಧಿಗಳಾದಮಾರಕ್ಕ, ಜಯಮ್ಮ, ಸಿದ್ದಪ್ಪ ಮಾತನಾಡಿ,ಕಳೆದ ಎರಡು ವರ್ಷಗಳಿಂದ ಕೊರೊನಾಕಾಯಿಲೆಯಿಂದ ನಮ್ಮ ಮಕಳು‌R ಶಾಲೆಗೆಹೋಗುತ್ತಿಲ್ಲ ಆನ್‌ಲೈನ್‌ಲ್ಲಿ ಅಥವಾ ಟೀವಿಮಾಧ್ಯಮದಲ್ಲಿ ನಮ್ಮ ಮಕ್ಕಳು ಶಿಕ್ಷಣಕಲಿಯಲು ಅವಕಾಶಗಳಿಲ್ಲ.

ಆದ್ದರಿಂದಸರ್ಕಾರ 3ನೇ ಅಲೆಯ ಮುಂಜಾಗ್ರತೆ ವಹಿಸಿತಳಸಮುದಾಯಗಳ ಮತ್ತು ಅಲೆಮಾರಿಮಕ್ಕಳ ಶಿಕ್ಷಣ ಅಭಿವೃದ್ಧಿಗಾಗಿ ತುರ್ತಾಗಿಸರ್ಕಾರಿ ಶಾಲೆಗಳನ್ನು ತೆರೆಯಬೇಕು ಎಂದುಸರ್ಕಾರವನ್ನು ಒತ್ತಾಯಿಸಿದರು.ದುಡಿಯುವ ಕೈಗಳಿಗೆ ಕೆಲಸ ನೀಡಿ: ಸ್ಲಂಜನಾಂದೋಲನ ಕರ್ನಾಟಕ ಗೌರವಧ್ಯಕ್ಷೆದೀಪಿಕಾ ಮಾತನಾಡಿ, ಕೋವಿಡ್‌ ಪ್ರಾರಂಭವಾಗಿ 1 ವರ್ಷ ಮೇಲಾಗುತ್ತಿದ್ದು, ದುಡಿದುತಿನ್ನುವ ಸಮುದಾಯಗಳಿಗೆ ಇಂದು ಹಸಿವುಕಾಡುತ್ತಿದೆ. ಏಕೆಂದರೆ ಕೆಲಸಕ್ಕೆ ಬೇಕಾದವಾತಾವರಣ ಎಲ್ಲೂ ಸಿಗುತ್ತಿಲ್ಲವಾದರಿಂದಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಹಾಗಾಗಿ, ಸರ್ಕಾರ ದುಡಿಯುವ ಕೈಗಳಿಗೆಕೆಲಸ ನೀಡಲು ಕ್ರಮ ಕೈಗೊಳ್ಳಬೇಕು. ಸಮಿತಿಯ ಕಾರ್ಯಕರ್ತರು ಕಳೆದ ಮೂರುತಿಂಗಳಿಂದ ಹಸಿವಿನಿಂದಿರುವ ಜನಸಮುದಾಯಗಳನ್ನು ಗುರುತಿಸಿ ಆಹಾರ ಕಿಟ್‌ಗಳನ್ನು ಮತ್ತು ಅಗತ್ಯ ನೆರವನ್ನು ನೀಡುವಕೆಲಸ ಮಾಡುತ್ತಿದ್ದು, ನಮ್ಮ ಸಂಘಟನೆಗೆತೃಪ್ತಿ ತಂದಿದೆ ಎಂದರು. ತುಮಕೂರು ಸ್ಲಂಸಮಿತಿಯ ಪದಾಧಿಕಾರಿ ಅರುಣ್‌,ತಿರುಮಲಯ್ಯ, ಮೋಹನ್‌, ಚಿಕ್ಕಅಶ್ವತ್ಥ್ಪ್ಪ,ರಾಜು, ಗೋವಿಂದ ಇದ್ದರು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next