Advertisement

ಮನೆಗೆ ಸಿಡಿಲು ಬಡಿದು ಹಾನಿ

06:25 AM Sep 13, 2017 | Team Udayavani |

ಸಿದ್ದಾಪುರ: ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಚೌಕುಳಮಕ್ಕಿ ವನಜಾ ಕುಲಾಲ್‌ ಹಳಗೇರಿ ಅವರ ಮನೆಗೆ ಸೋಮವಾರ ರಾತ್ರಿ ಸಿಡಿಲು ಬಡಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

Advertisement

ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ವಿದ್ಯುತ್‌ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿವೆ. ಮೀಟರ್‌ ಬೋರ್ಡ್‌, ಸ್ವಿಚ್‌ ಬೋರ್ಡ್‌, ವಯರಿಂಗ್‌ ಹಾನಿ ಗೊಂಡಿವೆ. ಸಿಡಿ ಲಿನ ರಭಸಕ್ಕೆ ಮನೆಯೊಳಗಿನ ವಸ್ತುಗಳು ಹಾನಿಗೀಡಾಗಿವೆ.
ಮಗುವೊಂದಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ಸಿಡಿಲಿನ ಆರ್ಭಟಕ್ಕೆ ಮನೆಮಂದಿ ಹೆದರಿ ಎಚ್ಚೆತ್ತಾಗ ಮನೆಗೆ ಹಾನಿಗೀಡಾಗಿರುವುದು ಗಮನಕ್ಕೆ ಬಂತು. ಆಜ್ರಿ ಗ್ರಾಮಕರಣಿಕ ಅಶೋಕ್‌, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿ ಕಾರಿ ಗೋಪಾಲ್‌, ಗ್ರಾ.ಪಂ. ಸದಸ್ಯ ರವಿ ಗಾಣಿಗ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next