Advertisement

ಹಾಡುಗಳ ಮೂಲಕ ಅಂಬಿಗೆ ನಮನ

12:30 AM Mar 02, 2019 | Team Udayavani |

ರೆಬೆಲ್‌ ಸ್ಟಾರ್‌ ಅಂಬರೀಶ್‌ ಹೆಸರಿನ ಜತೆ ಜತೆಗೇ ಹಲವಾರು ಸುಮಧುರ ಹಾಡುಗಳು ನೆನಪಾಗುತ್ತವೆ.ಅಂಥ ಹಾಡಿನ ಮೂಲಕ ಗೌರವ ಸಲ್ಲಿಸಲೆಂದೇ “ಅಂಬಿ ನಮನ’ ಎಂಬ ಬೃಹತ್‌ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Advertisement

ಸುಪ್ರಸಿದ್ಧ ಗಾಯಕರಾದ ಎಸ್‌.ಪಿ. ಬಾಲಸುಬ್ರಹ್ಮಣ್ಯಮ್‌, ವಿಜಯ್‌ ಪ್ರಕಾಶ್‌, ಗುರುಕಿರಣ್‌, ಮಂಜುಳಾ ಗುರುರಾಜ್‌, ಅರ್ಚನಾ ಉಡುಪ, ಅನುರಾಧ ಭಟ್‌, ನಂದಿತಾ ಅವರು ಅಂಬರೀಷ್‌ ನಟಿಸಿರುವ ಚಿತ್ರಗಳ ಗೀತೆಗಳನ್ನು ಹಾಡಲಿದ್ದಾರೆ. ಹಂಸಲೇಖ, ಅರ್ಜುನ್‌ ಜನ್ಯ ಕೂಡ ಉಪಸ್ಥಿತರಿರುತ್ತಾರೆ. ಸ್ಟಾರ್‌ ನಟರಾದ ವಿ. ರವಿಚಂದ್ರನ್‌, ಸುದೀಪ್‌, ದರ್ಶನ್‌, ಯಶ್‌ ಪಾಲ್ಗೊಳ್ಳುವರು. ಅಂಬರೀಶ್‌ ಅವರ ಆಯ್ದ ಗೀತೆಗಳಿಗೆ, ಯುವ ಕಲಾವಿದರು ಡ್ಯಾನ್ಸ್‌ ಮಾಡಲಿದ್ದಾರೆ. ಸಮರ್ಥನಂ ಅಂಗವಿಕಲರ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮದ ಮುಂದಾಳತ್ವವನ್ನು ರಾಕ್‌ಲೈನ್‌ ವೆಂಕಟೇಶ್‌ ಮತ್ತು ನಟ ಶಿವರಾಮ್‌ ವಹಿಸಿದ್ದಾರೆ.

ಅಂಬಿಗೆ ನಮನ

ಯಾವಾಗ?: ಮಾ.3,
ಭಾನುವಾರ, ಸಂ.5.30
ಎಲ್ಲಿ?: ನ್ಯಾಶನಲ್‌ ಕಾಲೇಜು
ಮೈದಾನ, ಬಸವನಗುಡಿ
ಪ್ರವೇಶ: 250 ರೂ.ಮೇಲ್ಪಟ್ಟು

Advertisement

Udayavani is now on Telegram. Click here to join our channel and stay updated with the latest news.

Next