Advertisement

ಮಹಾರಾಷ್ಟ್ರದಿಂದ ಮರಳಿದವರ ಗಂಟಲು ದ್ರವ ಸಂಗ್ರಹ

02:50 PM Jun 08, 2020 | Suhan S |

ತಾವರಗೇರಾ: ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಸುಮಾರು 8 ಜನರು ಶನಿವಾರ ಮರಳಿ ಬಂದಿದ್ದು, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವರ ಗಂಟಲುದ್ರವ ಸಂಗ್ರಹಿಸಲಾಯಿತು.

Advertisement

ತಾವರಗೇರಾ ಪಟ್ಟಣದ ಇಬ್ಬರು, ನವಲಹಳ್ಳಿಯ ಒಬ್ಬರು, ನಂದಾಪೂರದ ಇಬ್ಬರು, ಗರ್ಜನಾಳದ ಇಬ್ಬರು, ಹೊನಗಡ್ಡಿಯ ಒಬ್ಬರು ಮಹಾರಾಷ್ಟ್ರಕ್ಕೆ ಹೋಗಿದ್ದರು. ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶನಿವಾರ ಇವರೆಲ್ಲ ವಾಪಸ್‌ ಊರಿಗೆ ಬಂದಿದ್ದಾರೆ. ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇವರೆಲ್ಲರ ಗಂಟಲು ದ್ರವ ಸಂಗ್ರಹಿಸಲಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಕಾವೇರಿ ತಿಳಿಸಿದ್ದಾರೆ.

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಜಯರಾಜ, ಮುತ್ತಮ್ಮ, ದಾವಲಸಾಬ್‌, ಶರೀಫ್‌, ನಿರ್ಮಲಾ ಗಂಟಲು ದ್ರವ ಸಂಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next