Advertisement

ಥ್ರಿಲ್ಲರ್‌ “ಶಾರ್ದೂಲ’ರೆಡಿ

04:19 AM Jun 13, 2020 | Lakshmi GovindaRaj |

ಲಾಕ್‌ಡೌನ್‌ ಬಹುತೇಕ ಸಡಿಲಿಕೆಯಾಗಿದೆ. ಎಲ್ಲಾ ಕ್ಷೇತ್ರಗಳ ಕೆಲಸಗಳು ಆರಂಭವಾಗಿವೆ. ಸಿನಿಮಾ ಕ್ಷೇತ್ರದ ಮಂದಿ ಕೂಡಾ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಈಗ ಶಾರ್ದೂಲ ಎಂಬ ಸಿನಿಮಾ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದೆ. ಸಿನಿಮಾ ಬಿಡುಗಡೆಗೆ ಆನುಮತಿ ಸಿಕ್ಕ ಬೆನ್ನಲ್ಲೇ ಚಿತ್ರ ತೆರೆಕಾಣಲಿದೆ. ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್‌ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ.

Advertisement

ಕೊರೊನಾ ಹಾವಳಿಯಿಂದ ಸಿನಿಮಾ ಬಿಡುಗಡೆ ವಿಳಂಬವಾಗಿದ್ದು, ಅನುಮತಿ ದೊರಕಿದ ಕೂಡಲೆ ಚಿತ್ರವನ್ನು ತೆರೆಗ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.ಭೈರವ ಸಿನಿಮಾಸ್‌ ಲಾಂಛನದಲ್ಲಿ ಕಲ್ಯಾಣ್‌ ಸಿ ಹಾಗೂ ರೋಹಿತ್‌ .ಎಸ್‌
ಅವರು ಈ ಚಿತ್ರ ನಿರ್ಮಿಸಿದ್ದಾರೆ. ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್‌ ಕೂಡ ವಿಭಿನ್ನವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.

ನಮ್‌ ಏರಿಯಲ್ಲೊಂದು ದಿನ, ತುಘಲಕ್‌ ಹಾಗೂ ಹುಲಿರಾಯ ಚಿತ್ರಗಳನ್ನು ನಿರ್ದೇಶಿಸಿರುವ ಅರವಿಂದ್‌ ಕೌಶಿಕ್‌ ಈ ಚಿತ್ರದ ನಿರ್ದೇಶಕರು. ಇವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.. ದೆವ್ವ ಇರಬಹುದಾ ಎಂಬ ಅಡಿಬರಹ ಈ ಚಿತ್ರಕ್ಕಿದೆ.ವೈ.ಜಿ.ಆರ್‌. ಮನು ಛಾಯಾಗ್ರಹಣ, ಸತೀಶ್‌ ಬಾಬು ಸಂಗೀತ ನಿರ್ದೇಶನ, ಶಿವರಾಜ್‌ ಮೇಹು ಸಂಕಲನ ಹಾಗೂ ಮಾಸ್‌ ಮಾದ, ಅಲ್ಟಿಮೇಟ್‌ ಶಿವ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪಿ.ಯು.ಸಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚೇತನ್‌ ಚಂದ್ರ, ನಿರ್ದೇಶಕ, ನಟ ರವಿತೇಜ, ಕೃತಿಕ ರವೀಂದ್ರ, ಐಶ್ವರ್ಯ ಪ್ರಸಾದ್‌, ಕಲ್ಯಾಣ್‌, ಹೃಷಿಕೇಶ್‌, ಮಹೇಶ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ..

Advertisement

Udayavani is now on Telegram. Click here to join our channel and stay updated with the latest news.

Next