Advertisement

ಸೆಲ್ಫಿ ಸಾವು ;ರೈಲಿಗೆ ಸಿಲುಕಿ ಮೂವರು ಯುವಕರು ಛಿದ್ರ ಛಿದ್ರ !

11:11 AM Oct 03, 2017 | Team Udayavani |

ರಾಮನಗರ: ಇಲ್ಲಿನ ವಂಡರ್‌ ಲಾ ಗೇಟ್‌ ಬಳಿ ಸೆಲ್ಫಿ  ಹುಚ್ಚಿಗೆ ಮೂವರು ಯುವಕರು ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಭೀಕರ ದುರ್ಘ‌ಟನೆ ಮಂಗಳವಾರ ಬೆಳಗ್ಗೆ ನಡೆದಿದೆ. 

Advertisement

20 ರಿಂದ 25 ವರ್ಷ ಪ್ರಾಯದ ಮೂವರು ಯುವಕರು ರೈಲು ಹಳಿಯಲ್ಲಿ ನಿಂತು ಸೆಲ್ಫಿ  ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು. ಈ ವೇಳೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ  ರೈಲು ಮೂವರ ಮೇಲೆಯೇ ಹರಿದಿದೆ. ಪರಿಣಾಮವಾಗಿ ಮೂವರೂ ಛಿದ್ರ ಛಿದ್ರವಾಗಿ ಹೋಗಿದ್ದಾರೆ. 

ಮೂವರೂ ಮುಸ್ಲಿಂ ಯುವಕರು ಎಂದು ಹೇಳಲಾಗಿದ್ದು, ಇದುವರೆಗೆ ಗುರುತು ಪತ್ತೆಯಾಗಿಲ್ಲ. 

ಸ್ಥಳಕ್ಕೆ ಬಿಡದಿ ಹಾಗೂ ಚೆನ್ನಪಟ್ಟಣ ರೈಲ್ವೇ ಪೊಲೀಸರು ದೌಡಾಯಿಸಿದ್ದು ,ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳದಲ್ಲಿ ಯುವಕರು ತಂದಿದ್ದ 2 ಬೈಕ್‌ಗಳು ಪತ್ತೆಯಾಗಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next