Advertisement

Arrested: ಮೂವರು ಮೊಬೈಲ್‌ ಸುಲಿಗೆಕೋರರ ಬಂಧನ; 1.25 ಲಕ್ಷ ರೂ. ಮೌಲ್ಯದ ಮೊಬೈಲ್‌ಗ‌ಳ ವಶ

11:11 AM Jun 05, 2024 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಬೈಕ್‌ ತಗುಲಿದ ವಿಚಾರಕ್ಕೆ ಬುಲೆಟ್‌ ಸವಾರ ಮೇಲೆ ಹಲ್ಲೆ ನಡೆಸಿ ಐಫೋನ್‌ -15 ಸೇರಿ ಎರಡು ಮೊಬೈಲ್‌ ಸುಲಿಗೆ ಮಾಡಿ ದ್ದ ಮೂವರು ಆರೋಪಿಗಳನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಎಚ್‌ ಎಎಲ್‌ ನಿವಾಸಿ ಮಂಜುನಾಥ್‌(30), ಸರ್ಜಾಪುರ ನಿವಾಸಿ ಎನ್‌. ಕಾರ್ತಿಕ್‌(27) ಮತ್ತು ಬಸವನಗರ ನಿವಾಸಿ ಆರ್‌. ಕಾರ್ತಿಕ್‌ (29) ಬಂಧಿತರು. ಆರೋಪಿ ಗಳಿಂದ 1.25 ಲಕ್ಷ ರೂ. ರೂ. ಮೌಲ್ಯದ ಐಫೋನ್‌-15 ಮತ್ತು ಒನ್‌ ಪ್ಲಸ್‌ ಮೊಬೈಲ್‌ ವಶಕ್ಕೆ ಪಡೆಯ ಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಗಳು ಇತ್ತೀಚೆಗೆ ಠಾಣೆ ವ್ಯಾಪ್ತಿಯ ಗುಂಜೂರು ಪಾಳ್ಯದ ಬಾರ್‌ನಲ್ಲಿ ಮದ್ಯಪಾನ ಮಾಡಿ ಹೊರ ಗಡೆ ಬಂದಿದ್ದಾರೆ. ಅದೇ ವೇಳೆ ದೂರುದಾರರು ತಮ್ಮ ಬುಲೆಟ್‌ ಅನ್ನು ತೆಗೆಯು ವಾಗ ಪಕ್ಕದಲ್ಲಿ ನಿಲ್ಲಿಸಿದ್ದ ಆರೋಪಿಗಳ ಬೈಕ್‌ಗೆ ತಗುಲಿದೆ. ಇದೇ ವಿಚಾರಕ್ಕೆ ಮೂವರು ದೂರುದಾರರ ಜತೆ ಜಗಳ ತೆಗೆದು ಹಲ್ಲೆ ನಡೆಸಿ ಸುಲಿಗೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next