Advertisement

ಶ್ರೀನಗರ ಎನ್‌ಕೌಂಟರ್‌: 3 ಉಗ್ರರ ಹತ್ಯೆ, ಓರ್ವ ಪೊಲೀಸ್‌ ಸಾವು

11:14 AM Oct 17, 2018 | Team Udayavani |

ಜಮ್ಮು : ಇಂದು ಬುಧವಾರ  ನಸುಕಿನ ವೇಳೆ ಶ್ರೀನಗರದ ಫ‌ತೇ ಕದಾಲ್‌ ಪ್ರದೇಶದಲ್ಲಿ  ಸಂಭವಿಸಿದ ಭೀಕರ ಗುಂಡಿನ ಕಾಳಗದಲ್ಲಿ ಕನಿಷ್ಠ ಮೂವರು ಉಗ್ರರು ಪೊಲೀಸರ ಗುಂಡಿಗೆ ಬಲಿಯಾದರು.

Advertisement

ಎಎನ್‌ಐ ವರದಿಯ ಪ್ರಕಾರ ಈ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಮತ್ತು ಓರ್ವ ಪೊಲೀಸ್‌ ಸಿಬಂದಿ ಮೃತಪಟ್ಟಿದ್ದಾರೆ.

ತಾಜಾ ವರದಿಗಳ ಪ್ರಕಾರ ಸೇನೆ, ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ನಡೆಸಿರುವ ಈ ಜಂಟಿ ಕಾರ್ಯಾಚರಣೆ ಇದೀಗ ಮುಗಿದಿದ್ದು ಬದುಕುಳಿದಿರಬಹುದಾದ ಇನ್ನಷ್ಟು ಉಗ್ರರಿಗಾಗಿ ಶೋಧ ಕಾರ್ಯ ಆರಂಭವಾಗಿದೆ. 

ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತರಾಗಿರುವುದನ್ನು ಶ್ರೀನಗರದ ಎಸ್‌ಎಸ್‌ಪಿ ಇಮಿ¤ಯಾಜ್‌ ಇಸ್ಮಾಯಿಲ್‌ ಪಾರೇ ದೃಢೀಕರಿಸಿದ್ದಾರೆ. ಅಂತೆಯೇ ಪೊಲೀಸ್‌ ಸಿಬಂದಿ ಓರ್ವರು ಮೃತಪಟ್ಟಿರುವುದನ್ನೂ ಅವರು ದೃಢೀಕರಿಸಿದ್ದಾರೆ. 

ಎನ್‌ಕೌಂಟರ್‌ ತಾಣದಲ್ಲಿ ಇನ್ನೂ ಅಡಗಿಕೊಂಡಿರುವ ಉಗ್ರರಲ್ಲಿ ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆಯ ಓರ್ವ ಉನ್ನತ ಕಮಾಂಡರ್‌ ಕೂಡ ಸೇರಿದ್ದಾನೆ ಎಂದು ವರದಿಗಳು ಹೇಳಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next