Advertisement

ಯುವಕನ ಕೊಂದ ಮೂವರ ಸೆರೆ

10:33 AM Nov 19, 2018 | Team Udayavani |

ಕಲಬುರಗಿ: ನಗರದ ಲಾರಿ ತಂಗುದಾಣದ ಬಳಿ ಇತ್ತೀಚೆಗೆ ಯುವಕನೊಬ್ಬನ ಮೇಲೆ ಭಾರಿ ಗಾತ್ರದ ಸಿಮೆಂಟ್‌ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಚೌಕ್‌ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂಬೇಡ್ಕರ್‌ ಆಶ್ರಯ ಕಾಲೋನಿಯ ರಾಘವೇಂದ್ರ ಅಲಿಯಾಸ್‌ ರಾಕೇಶ ಎನ್ನುವನನ್ನು ನ.15 ರಂದು ಬೆಳಗಿನ ಜಾವ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಚೌಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

ಎಸ್‌ಪಿ, ಹೆಚ್ಚುವರಿ ಎಸ್‌ಪಿ, ಬಿ.ಉಪವಿಭಾಗದ ಡಿಎಸ್‌ಪಿ ಎಂ. ಪಾಂಡುರಂಗಯ್ಯ ಮಾರ್ಗದರ್ಶನದಲ್ಲಿ ಚೌಕ್‌ ಪಿಐ ಸಂಗಮನಾಥ ಹಿರೇಮಠ ಹಾಗೂ ಸಿಬ್ಬಂದಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.  ಆಶ್ರಯ ಕಾಲೋನಿಯ ಮಹೇಶ ಲಂಕೇಶ ಕಾತರಕಿ, ಕಾರು ಚಾಲಕ ನಾಗೇಶ ಅಲಿಯಾಸ್‌ ನಾಗೂ ಸುಭಾಶ್ಚಂದ್ರ ಮಹಾಶೆಟ್ಟಿ, ಬಸವರಾಜ ಅಲಿಯಾಸ್‌ ಬಸ್ಸು ಸಿದ್ದಣ್ಣ ಕುಂಬಾರ ಎನ್ನುವರನ್ನು ಬಂಧಿಸಿ, ಕೊಲೆಗೆ ಬಳಸಲಾದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಪ್ರಕರಣದ ಪ್ರಥಮ ಆರೋಪಿ ಮಹೇಶ ಕಾತರಕಿ ಏಳು ಸ್ಟಾರ್‌ ಪ್ರದೀಪ ಗ್ಯಾಂಗ್‌ನ ಸಹಚರ ಎನ್ನಲಾಗಿದ್ದು, ಈ ಕೊಲೆ ರೌಡಿ ಪ್ರದೀಪನ ಬೆಂಬಲದಿಂದಲೇ ಆಗಿದೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next