Advertisement

ಮೂರು ಕಾಲಿನ ಕುರ್ಚಿ

10:16 AM Dec 21, 2017 | |

ಒಂದು ದಿನ ಅಕ್ಬರ್  ಮತ್ತು ಬೀರಬಲ್ ವಾಯುವಿಹಾರಕ್ಕೆಂದು ತೆರಳಿದ್ದರು. ದಾರಿಮಧ್ಯೆ ಯಾವುದೋ ವಿಷಯಕ್ಕೆ ಅವರಿಬ್ಬರ ನಡುವೆ ಜಗಳವಾಯಿತು. ಆಸ್ಥಾನದಲ್ಲಿ ಹೆಚ್ಚಿನವರು ಕುರುಡರು ಎಂಬುದು ಬೀರಬಲ್ಲನ ವಾದವಾಗಿತ್ತು. ಅದನ್ನೊಪ್ಪದ ಅಕºರ್‌ ಬೀರಬಲ್ಲನನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದನು.

Advertisement

ಮಾರನೇ ದಿನ ಬೀರಬಲ್ಲ ಆಸ್ಥಾನದಲ್ಲಿ ಮೂರು ಕಾಲಿನ ಕುರ್ಚಿಯನ್ನು ರಿಪೇರಿ ಮಾಡುತ್ತಿದ್ದನು. ಆಸ್ಥಾನಿಕರೆಲ್ಲರೂ ಅವನ ಬಳಿ ಬಂದು ಮೂರು ಕಾಲಿನ ಕುರ್ಚಿ ಕಂಡು ಆಶ್ಚರ್ಯಚಕಿತರಾಗಿ “ಏನಯ್ನಾ ಮಾಡುತ್ತಿದ್ದೀಯಾ’ ಎಂದು ಕೇಳತೊಡಗಿದರು. ಹಾಗೆ ಕೇಳಿದವರೆಲ್ಲರಿಗೂ ಬೀರಬಲ್ಲ ಶಾಂತಚಿತ್ತನಾಗಿ ಉತ್ತರಿಸುತ್ತಿದ್ದ. ಇನ್ನು ಕೆಲವರು “ಮೂರು ಕಾಲಿನ ಕುರ್ಚಿಯಲ್ಲಿ ಹೇಗೆ ಕೂರುವೆ?’ ಎಂದು ಪ್ರಶ್ನಿಸತೊಡಗಿದರು. ಅವರಿಗೂ ಸಮಾಧಾನದಿಂದ ಉತ್ತರ ಹೇಳಿದನು ಬೀರಬಲ್ಲ. ಸ್ವಲ್ಪ ಹೊತ್ತಿನಲ್ಲಿ ಅಕºರ್‌ ಬಂದು ನೆನ್ನೆಯ ಪಂದ್ಯದ ಬಗ್ಗೆ ಕೇಳಿದಾಗ, ಅವತ್ತು ಬೆಳಗ್ಗಿನಿಂದ ನಡೆದ ಘಟನೆಯನ್ನು ವಿವರಿಸಿದ. “ನಾನು ಮಾಡುತ್ತಿರುವುದನ್ನು ಕಣ್ಣಾರೆ ಕಂಡರೂ ತುಂಬಾ ಮಂದಿ ಏನು ಮಾಡುತ್ತಿರುವೆ ಎಂದು ಪ್ರಶ್ನಿಸಿದರು. ಅವರೆಲ್ಲರೂ ಕುರುಡರು. ಉಳಿದ ಕೆಲವರು ಮಾತ್ರ ದೃಷ್ಟಿಯಿರುವವರು’ ಎಂದು ತನ್ನ ವಾದವನ್ನು ಸಮರ್ಥಿಸಿಕೊಂಡ. ಅಕºರ ತನ್ನ ಸೋಲನ್ನು ಒಪ್ಪಿಕೊಂಡು ಬೀರಬಲ್ಲನನ್ನು ಆಲಂಗಿಸಿದ.

ಸಿದ್ದು ನಡವಿನಮನಿ 

Advertisement

Udayavani is now on Telegram. Click here to join our channel and stay updated with the latest news.

Next