Advertisement

Kuwait ತೆರಳಿದ್ದ 3 ಭಾರತೀಯರು ಸಿನಿಮೀಯ ರೀತಿ ಪಾರು: ಪೊಲೀಸರಿಗೆ ಅತಿಥಿ

12:02 AM Feb 08, 2024 | Team Udayavani |

ಮುಂಬಯಿ: ಉಜ್ವಲ ಭವಿಷ್ಯ, ಉದ್ಯೋಗದ ಕನಸನ್ನು ಹೊತ್ತು 2 ವರ್ಷಗಳ ಹಿಂದೆ ತಮಿಳು ನಾಡಿನಿಂದ ಕುವೈಟ್‌ಗೆ ತೆರಳಿ ಅಲ್ಲಿ ದೈಹಿಕ, ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಮೂವರು ಭಾರತೀಯರು ಈಗ ಸಿನಿಮೀಯ ರೀತಿ ಪಾರಾಗಿ ಭಾರತಕ್ಕೆ ಹಿಂದಿರುಗಿದ್ದಾರೆ. ಆದರೆ ಈ ಮೂವರ ಈ ಸಾಹಸ ಪಯಣ ಮುಂಬಯಿಯಲ್ಲಿ ಪೊಲೀಸರಿಗೆ ಅತಿಥಿ ಯಾಗುವ ಮೂಲಕ ತಿರುವು ಪಡೆದಿದೆ.

Advertisement

ನಿಟೊÕà ಡಿಟ್ಟೊ (31), ವಿಜಯ್‌ ವಿನಯ್‌ ಆ್ಯಂಥೋನಿ (29) ಹಾಗೂ ಸಹಾಯತ್ತ ಅನಿಶ್‌ (29) ಕುವೈಟ್‌ಗೆ ಕೆಲಸಕ್ಕಾಗಿ ಹೋಗಿದ್ದರು. ಅಲ್ಲಿ ಅಬ್ದುಲ್ಲಾ ಶರಹೀದ್‌ ಎಂಬಾತನಿಂದ ಕಿರು ಕುಳಕ್ಕೆ ಒಳಗಾಗಿದ್ದಾರೆ. ಕೊನೆಗೆ ಅವನದ್ದೇ ಹಡಗನ್ನು ಕದ್ದು ಹಲವಾರು ದೇಶಗಳನ್ನು ದಾಟಿ ಭಾರತಕ್ಕೆ ಬಂದಿದ್ದಾರೆ. ಆದರೆ ಮುಂಬಯಿ ಯಲ್ಲಿ ದಾಖಲೆ ಇಲ್ಲದಕ್ಕೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next