Advertisement

ರಾಮ,ಕೃಷ್ಣ,ಹನುಮಂತನ ವೇಷ ಧರಿಸಿ ಮಾಸ್ಕ್ ವಿತರಿಸಿದ ಹೋಟೆಲ್ ನೌಕರರು

01:48 PM Apr 21, 2021 | Team Udayavani |

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ವಿರುದ್ಧ ಮೂವರು ಹೋಟೆಲ್ ನೌಕರರು ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ.

Advertisement

ರಾಮನವಮಿ ದಿನವಾದ ಇಂದು ಮರ್ಯಾದಾ ಪುರುಷೋತ್ತಮ ರಾಮ,ಶ್ರೀ ಕೃಷ್ಣ ಪರಮಾತ್ಮ ಹಾಗೂ ವಾಯುಪುತ್ರ ಹನುಮಾನ್‍ನ ಪೋಷಾಕು ಧರಿಸಿದ ಅಭಿಷೇಕ್, ನವೀನ್ ಹಾಗೂ ಬಾಷಾ ಬೆಂಗಳೂರಿನ ಜನರಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಬೆಳ್ಳಂಬೆಳಿಗ್ಗೆ ರೋಡಿಗಿಳಿದ ಈ ಮೂವರು ಶಾಂತಿಧೂತ ರಾಮನ ವೇಷವನ್ನು ಧರಿಸಿ ಗಮನ ಸೆಳೆದರು.

ಸಾರ್ವಜನಿಕರು ಸೇರಿದ ಸ್ಥಳಗಳಿಗೆ ತೆರಳಿ ಕೋವಿಡ್ ವಿರುದ್ಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಸಿದರು. ತಪ್ಪದೆ ಮಾಸ್ಕ್ ಹಾಕಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ವಿನಂತಿಸಿಕೊಂಡರು. ಹಾಗೂ ಮಾಸ್ಕ್ ಧರಿಸದವರಿಗೆ ತಾವೇ ಮಾಸ್ಕ್ ವಿತರಿಸಿದರು.

Advertisement

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಎಗ್ಗಿಲ್ಲದೆ ಹಬ್ಬುತ್ತಿದೆ. ಮಂಗಳವಾರ ಬರೋಬ್ಬರಿ 13 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿ ಆತಂಕ ಮೂಡಿಸಿದೆ. ಸರ್ಕಾರ ಕೂಡ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮೇ.4ರ ವರೆಗೆ ರಾತ್ರಿ ಕರ್ಫ್ಯೂ ಹೇರಿ ಆದೇಶ ಹೊರಡಿಸಿದೆ. ಜನರು ಕೂಡ ಕೋವಿಡ್ ವಿರುದ್ಧ ಹೋರಾಟಕ್ಕೆ ಸಹಕಾರ ನೀಡಿ ಎಂದು ಮಂಗಳವಾರವಷ್ಟೇ ವಿನಂತಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಯುವಕರು ಕೋವಿಡ್ ಕುರಿತು ವಿಭಿನ್ನವಾಗಿ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next