Advertisement

Blind Cricket: ಅಂಧರ ವನಿತಾ ತಂಡದಲ್ಲಿ ಕರ್ನಾಟಕದ ಮೂವರು

12:24 AM Apr 14, 2023 | Team Udayavani |

ಬೆಂಗಳೂರು: ಮುಂಬರುವ ದ್ವಿಪಕ್ಷೀಯ ಸರಣಿಗಾಗಿ ಭಾರತೀಯ ಅಂಧರ ಕ್ರಿಕೆಟ್‌ ಅಸೋಸಿಯೇಶನ್‌ ಇದೇ ಮೊದಲ ಬಾರಿಗೆ ದೇಶವನ್ನು ಪ್ರತಿನಿಧಿಸುವ ಅಂಧರ ವನಿತಾ ಕ್ರಿಕೆಟ್‌ ತಂಡವನ್ನು ಪ್ರಕಟಿಸಿದೆ. ಎಪ್ರಿಲ್‌ 25ರಿಂದ 30ರ ವರೆಗೆ ನೇಪಾಲದಲ್ಲಿ ಈ ದ್ವಿಪಕ್ಷೀಯ ಸರಣಿ ನಡೆಯಲಿದೆ. ಭಾರತ ಮತ್ತು ನೇಪಾಲದ ತಂಡಗಳು ಭಾಗವಹಿಸಲಿವೆ.

Advertisement

17 ಸದಸ್ಯರ ತಂಡವನ್ನು ಮಧ್ಯಪ್ರದೇಶದ ಸುಷ್ಮಾ ಪಟೇಲ್‌ ಮುನ್ನಡೆಸಲಿದ್ದಾರೆ. ಕರ್ನಾಟಕದ ಗಂಗವ್ವ ನೀಲಪ್ಪ ಹರಿಜನ್‌ ಉಪನಾಯಕಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಗಂಗವ್ವ ಅವರಲ್ಲದೇ ಕರ್ನಾಟಕದ ವರ್ಷಾ ಮತ್ತು ದೀಪಿಕಾ ತಂಡದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next