Advertisement

ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹಾರಿದ ತಾಯಿ: ಮೂವರು ಸಾವು

02:09 PM Jun 24, 2021 | Team Udayavani |

ತುಮಕೂರು: ತೋಟದಲ್ಲಿದ್ದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದ ಮಕ್ಕಳನ್ನು ರಕ್ಷಿಸಲೂ ಬಾವಿಗೆ ಹಾರಿದ ತಾಯಿಯೂ ಮೃತಪಟ್ಟಿರುವ ಘಟನೆ ಗುರುವಾರ ಜಿಲ್ಲೆಯಲ್ಲಿ ನಡೆದಿದೆ.

Advertisement

ತುಮಕೂರು ತಾಲೂಕಿನ ಕೋರಾ ಠಾಣೆ ವ್ಯಾಪ್ತಿಯ ತಿರುಮಲ ಪಾಳ್ಯದ ಬಳಿ ಇರುವ ತೋಟದಲ್ಲಿ ತೆರೆದ ಬಾವಿಗೆ ಬಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಹಾಡುಹಗಲೇ ಕಚೇರಿ ಮುಂದೆ ಮಾಜಿ ಕಾರ್ಪೊರೇಟರ್ ಭೀಕರ ಹತ್ಯೆ

ಹೇಮಲತಾ ಅವರು ತೋಟದ ಕೆಲಸಕ್ಕೆ ಬೆಳಿಗ್ಗೆ ಮಕ್ಕಳೊಡನೆ ಬಂದಿದ್ದರು. ಅಲ್ಲಿಯೇ ಸೀಬೆ ಗಿಡದ ಬಳಿ ಆಟ ಆಡುತ್ತಿದ್ದ ಮೂರು ವರ್ಷದ ಮಗಳು ಪೂರ್ವಿಕಾ ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದಿದ್ದಾಳೆ. ಇದನ್ನು ಕಂಡು ಮತ್ತೊಬ್ಬಳು ಮಗಳು ಆರು ವರ್ಷದ ಮಾನಸ ಸಹ ಬಾವಿಗೆ ಬಿದ್ದಿದ್ದಾಳೆ. ಇಬ್ಬರು ಮಕ್ಕಳು ಬಾವಿಗೆ ಬಿದ್ದಿದ್ದನ್ನು ಕಂಡು ತಾಯಿ ಹೇಮಲತಾ 38 ಸಹ ಮಕ್ಕಳನ್ನು ರಕ್ಷಿಸಲು ಬಾವಿಗೆ ಹಾರಿದ್ದು, ಬಾವಿಯಿಂದ ಮೂವರು ಹೊರಬರಲಾಗದೇ ಪ್ರಾಣ ಕಳೆದುಕೊಂಡಿದ್ದಾರೆ.

Advertisement

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಶಹಾಪುರವಾಡ್ ಡಿವೈಎಸ್ಪಿ ಸಿಪಿಐ ಎಚ್.ಶ್ರೀನಿವಾಸ್ ಕೋರಾ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next