Advertisement

Arrested: ನಗರದಲ್ಲಿ ಮೂವರು ಆನೆ ದಂತಚೋರರ ಬಂಧನ

11:17 AM Aug 18, 2024 | Team Udayavani |

ಬೆಂಗಳೂರು: ಬೆಂಗಳೂರಿನ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೂವರು ಆನೆದಂತ ಚೋರರನ್ನು ಬಂಧಿಸಿದ್ದಾರೆ.

Advertisement

ಆರೋಪಿಗಳಿಂದ 8.5 ಮತ್ತು 9 ಕೆ.ಜಿ ತೂಕದ ಬೆಲೆ ಬಾಳುವ 2 ದಂತಗಳನ್ನು ಜಪ್ತಿ ಮಾಡಲಾಗಿದೆ.

ಮೋಹನ್‌, ಆನಂದ್‌ ಹಾಗೂ ವಿನೋದ್‌ ಬಂಧಿತರು. ಆರೋಪಿಗಳು ಶನಿವಾರ ಆನೆಯ ದಂತಗಳನ್ನು ಮಾರಾಟಕ್ಕಾಗಿ ಹೊರ ಜಿಲ್ಲೆಗಳಿಂದ ಬೆಂಗಳೂರಿಗೆ ತರುತ್ತಿರುವ ಬಗ್ಗೆ ಬೆಂಗಳೂರು ನಗರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಖಚಿತ ಮಾಹಿತಿ ಬಂದಿತ್ತು. ಬೆಂಗಳೂರು ಹಾಗೂ ಯಲಹಂಕ ವಲಯ ಅರಣ್ಯಾಧಿಕಾರಿಗಳನ್ನು ಒಳಗೊಂಡ 2 ಪ್ರತ್ಯೇಕ ತಂಡ ರಚಿಸಿಕೊಂಡು ರಾಜನುಕುಂಟೆ ಏರ್‌ಪೋರ್ಟ್‌ ರಸ್ತೆಯ ಸಾದರಹಳ್ಳಿ ಬಳಿ ಆರೋಪಿಗಳಿಗಾಗಿ ಕಾಯುತ್ತಿದ್ದರು. ಆರೋಪಿಗಳ  ಕಾರಿನ ನಂಬರ್‌ ಮೊದಲೇ ಅರಿತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಅವರ ವಾಹನ ಬರುತ್ತಿದ್ದಂತೆ ಅಡ್ಡಗಟ್ಟಿ ಪರಿಶೀಲಿಸಿದ್ದಾರೆ. ಈ ವೇಳೆ ವಾಹನದಲ್ಲಿ 2 ಆನೆ ದಂತಗಳು ಪತ್ತೆಯಾಗಿವೆ.

 

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next