Advertisement

ಉತ್ತರ ಪ್ರದೇಶ: ಬಸ್ಸು ಕಮರಿಗೆ ಬಿದ್ದು 3 ಸಾವು; 12 ಮಂದಿಗೆ ಗಾಯ

02:03 PM Feb 09, 2019 | Team Udayavani |

ಲಖೀಂಪುರ ಖೇರಿ, ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ ಲಖೀಂಪುರ ದಿಂದ ಪಾಲಿಯಾ ಗೆ ಪ್ರಯಾಣಿಕರನ್ನು ಒಯ್ಯುತ್ತಿದ್ದ ಖಾಸಗಿ ಬಸ್ಸು,  ಪಾಲಿಯಾ-ಕೋತ್ವಾಲಿ ಪ್ರದೇಶದಲ್ಲಿ ಆಳವಾದ ಕಮರಿಗೆ ಉರುಳಿ ಬಿದ್ದ ಭೀಕರ ದುರಂತದಲ್ಲಿ ಮೂವರು ಮೃತಪಟ್ಟು 12ಕ್ಕೂ ಹೆಚ್ಚು ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ. 

Advertisement

ಬಸ್ಸಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸಲ್ಪಡುತ್ತಲೇ ಮೃತಪಟ್ಟರು ಎಂದವರು ತಿಳಿಸಿದ್ದಾರೆ. 

ಮೃತರನ್ನು ಅರುಣ್‌ ಕುಮಾರ್‌ ಮಿಶ್ರಾ (35), ಅಶ್‌ಫ‌ಕ್‌ ಅಲಿ (60) ಮತ್ತು ಅಜಿತ್‌ ಮಿಶ್ರಾ (18) ಎಂದು ಗುರುತಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next