Advertisement

ಹೆಂಡತಿ ಮೇಲೆ ಅತ್ಯಾಚಾರ ಎಸಗಿ ಬ್ಲ್ಯಾಕ್‌ ಮೇಲ್ ಮಾಡಿದ ವ್ಯಕ್ತಿಯ ಹತ್ಯೆ: ಮೂವರು ಅರೆಸ್ಟ್

07:05 PM Jul 12, 2022 | Team Udayavani |

ಮಹದೇವಪುರ: ವ್ಯಕ್ತಿಯನ್ನು ಕೊಲೆ ಮಾಡಿ ಮೃತದೇಹವನ್ನು ಮೂಟೆ ಕಟ್ಟಿ ಚರಂಡಿಯಲ್ಲಿ ಬಿಸಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಉತ್ತರ ಭಾರತದ ಮೂಲದ ವಿಶಾಲ್ ಪ್ರಜಾಪತಿ(25 ) ರುಬಿ ಪ್ರಜಾಪತಿ(23), ಗುಂಜಾದೇವಿ ಬಂಧಿತ ಆರೋಪಿಗಳು.

ಬಿಹಾರ ಮೂಲದ  ಓಂನಾಥ್ ಸಿಂಗ್ (45) ಕೊಲೆಯಾದ ವ್ಯಕ್ತಿ. ಈತ  ಅಂಗಡಿಗಳಿಗೆ ಗುಟ್ಕಾ ಪ್ಯಾಕೇಟ್ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದ.

ಘಟನೆಯ ವಿವರ: ಓಂನಾಥ್ ಸಿಂಗ್ ಬೆಳತ್ತೂರು‌ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಇದೇ ಕಟ್ಟಡದಲ್ಲಿ ಉತ್ತರ ಭಾರತದ ಮೂಲದ ರುಬಿ ಪ್ರಜಾಪತಿ ಎನ್ನುವವಳ ಮೇಲೆ ಓಂನಾಥ್ ಕಣ್ಣು ಹಾಕಿದ್ದ. ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಒಂದು ದಿನ ಓಂನಾಥ್ ರುಬಿ ಪ್ರಜಾಪತಿ ಗಂಡ ಮನೆಯಲ್ಲಿ ಇಲ್ಲದ ವೇಳೆ ರುಬಿ ಟೀಯಲ್ಲಿ ನಿದ್ದೆ ಮಾತ್ರೆ ಹಾಕಿ ದೌರ್ಜನ್ಯದಿಂದ ಆಕೆಯ ಮೇಲೆ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿದ್ದ. ಇದೇ ವಿಡಿಯೋ ಇಟ್ಕೊಂಡು ಆಕೆಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ.‌

ಇದನ್ನೂ ಓದಿ:ಕುಷ್ಟಗಿ : ತಾಲೂಕಿನ 23 ಕೆರೆಗಳನ್ನು ಅಮೃತ ಸರೋವರವಾಗಿ ರೂಪಿಸಲು ಯೋಜನೆ

Advertisement

ರುಬಿ ಗಂಡನಿಂದಲೇ ಹತ್ಯೆಗೆ ಪ್ಲ್ಯಾನ್:‌ ಓಂನಾಥ್‌ ಕಿರುಕುಳ ಹೆಚ್ಚಾಗುತ್ತಿದ್ದಂತೆ, ರುಬಿ ತನ್ನ ಗಂಡನ ಬಳಿ ಎಲ್ಲಾ ವಿಷಯವನ್ನು ಹೇಳಿದ್ದಾಳೆ. ಇದರಿಂದ ರೊಚ್ಚಿಗೆದ್ದ ವಿಶಾಲ್‌ ಪ್ರಜಾಪತಿ ಪಕ್ಕಾ ಪ್ಲ್ಯಾನ್‌ ಮಾಡಿ ಜುಲೈ 4ರಂದು ಓಂನಾಥ್ ಸಿಂಗ್ ನನ್ನು ಮನೆಗೆ ಕರೆಸಿ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಹತ್ಯೆ ಮಾಡಿದ್ದಾರೆ.

ಹತ್ಯೆಯ ಬಳಿಕ ಸಾಕ್ಷಿ ನಾಶಪಡಿಸಲು ಮೃತದೇಹವನ್ನು ಮೂಟೆ ಕಟ್ಟಿ ಬೆಳತ್ತೂರು ರಸ್ತೆಯ ಚರಂಡಿಯಲ್ಲಿ ಶವ ಎಸೆದು, ಮಂಗಳೂರಿನಲ್ಲಿ ತಲೆಮಾರಿಸಿಕೊಂಡಿದ್ದರು.

ಸ್ಥಳೀಯರ ವಿಚಾರಣೆ ವೇಳೆ ಶವದ ಗುರುತು ಪತ್ತೆ ಮಾಡಿದ ಕಾಡುಗೋಡಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು, ಪೋಸ್ಟ್ ಮಾರ್ಟಂ ವೇಳೆ ಅದು ಕೊಲೆ ಅನ್ನೋದು ಧೃಡಪಡಿಸಿಕೊಂಡಿದ್ದಾರೆ.

ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next