1000 ಪೌರ ಕಾರ್ಮಿಕರು ತಂಡ ತಂಡವಾಗಿ ಸಿಂಗಾಪುರಕ್ಕೆ ಹೋಗಲಿದ್ದಾರೆ.
Advertisement
ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಒಟ್ಟು ಒಂದು ಸಾವಿರ ಪೌರ ಕಾರ್ಮಿಕರನ್ನು ಆಯ್ಕೆ ಮಾಡಿ ಸಿಂಗಾಪುರ ಪ್ರವಾಸ ಕಳುಹಿಸಲಾಗುವುದು. ಜತೆಗೆ ಪೌರ ಕಾರ್ಮಿಕ ಸಂಘಟನೆ ಮುಖಂಡರೂ ಇರುತ್ತಾರೆ. ಇವರಿಗೆ ಮಾಹಿತಿ ಒದಗಿಸಲು ಇಲಾಖೆಯ ಕೆಲವು ಅಧಿಕಾರಿಗಳೂ ತೆರಳಲಿದ್ದಾರೆ ಎಂದು ಹೇಳಿದರು.
Related Articles
Advertisement
ಸಿಂಗಾಪುರದಲ್ಲಿ ಮ್ಯಾನ್ಹೋಲ್ ಸ್ವತ್ಛತೆಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಲಕರಣೆಗಳನ್ನು ಬಳಸಲಾಗುತ್ತಿದೆ. ಅವುಗಳನ್ನು ಅಧ್ಯಯನ ಮಾಡುವುದರೊಂದಿಗೆ ಸ್ವತ್ಛತೆಗೆ ಬಳಸುವ ಯಂತ್ರಗಳನ್ನು ಪರಿಶೀಲಿಸಿ ಅಲ್ಲಿ ಯಾವ ರೀತಿಮ್ಯಾನ್ಹೋಲ್ ಸ್ವತ್ಛತಾ ಕಾರ್ಯ ನಡೆಯುತ್ತದೆ ಎಂಬುದನ್ನು ಖುದ್ದಾಗಿ ವೀಕ್ಷಿಸಲಾಗುತ್ತದೆ. ಇದಾದ ನಂತರ ರಾಜ್ಯದಲ್ಲೂ ಅದೇ ಮಾದರಿಯ ಅತ್ಯಾಧುನಿಕ ಸ್ವತ್ಛತಾ ಪದಟಛಿತಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು. ಮೊದಲ ಹಂತದಲ್ಲಿ ತಲಾ 10 ಮಂದಿಯನ್ನೊಳಗೊಂಡ ಏಳು ತಂಡಗಳನ್ನು ಪ್ರವಾಸಕ್ಕೆ ಕಳುಹಿಸಲಾಗುವುದು. ಪ್ರತಿ ಜಿಲ್ಲೆಯಿಂದ 30ರಿಂದ 40 ಪೌರ ಕಾರ್ಮಿಕರನ್ನು ಇದಕ್ಕೆ ಆಯ್ಕೆ ಮಾಡಲಾಗುವುದು. ಪ್ರತಿ ನಗರ ಸ್ಥಳೀಯ ಸಂಸ್ಥೆಗಳಿಂದಲೂ ಪ್ರತಿನಿಧಿಗಳು ಇರುವಂತೆ ನೋಡಿಕೊಳ್ಳಲಾಗುವುದು ಎಂದರು. ಮಾನವ ರಹಿತ ಯಂತ್ರಗಳ ಮೂಲಕ ಮ್ಯಾನ್ ಹೋಲ್ ಸ್ವತ್ಛಗೊಳಿಸುವ ತಂತ್ರಜ್ಞಾನದ ಬಗ್ಗೆ ನಮ್ಮ ಪೌರ ಕಾರ್ಮಿಕರಿಗೆ ಮಾಹಿತಿ ನೀಡುವುದರ ಜತೆಗೆ ಯಾರೇ ಹೇಳಿದರೂ ಮ್ಯಾನ್ಹೋಲ್ಗಳಿಗೆ ಇಳಿಯದಂತೆ ಅವರಲ್ಲಿ ಜಾಗೃತಿ ಮೂಡಿಸಲು ಈ ಪ್ರವಾಸ ನೆರವಾಗಲಿದೆ ಎಂದು ತಿಳಿಸಿದರು.