Advertisement

ಈ ಬಾರಿ ಸಮ್ಮೇಳನ ರಸೀದಿಗೆ ಬಾರ್‌ಕೋಡ್‌

10:41 PM Jan 04, 2020 | Lakshmi GovindaRaj |

ಕಲಬುರಗಿ: ಪಾರದರ್ಶಕತೆ ಕಾಪಾಡಲು ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಬಾರಿ ರಸೀದಿಗಳಿಗೆ ಬಾರ್‌ ಕೋಡ್‌ ವ್ಯವಸ್ಥೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಈ ಹಿಂದಿನ ಸಮ್ಮೇಳನಗಳ ವೇಳೆ ನಕಲಿ ರಸೀದಿ ಸೃಷ್ಟಿಸಿದ ಅಪವಾದ ಕೇಳಿಬಂದಿದ್ದರಿಂದ ಕ್ರಮ ಕೈಗೊಳ್ಳ ಲಾಗಿದೆ. ರಸೀದಿಗಳಲ್ಲಿ ಕ್ರಮ ಸಂಖ್ಯೆ, ಬಾರ್‌ಕೋರ್ಡ್‌ ಇದ್ದು‌ ಯಾವುದೇ ಗೊಂದಲ, ನಕಲಿಗೆ ಆಸ್ಪದ ಇರಲ್ಲ ಎಂದರು.

Advertisement

ಸಮ್ಮೇಳನಕ್ಕೆ ಸುಮಾರು 15 ಸಾವಿರ ಸಾಹಿತ್ಯಾಸಕ್ತರು ಹೆಸರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಹೊಂದ ಲಾಗಿದೆ. ಪ್ರತಿನಿಧಿಗಳಿಗೆ 250 ರೂ. ಶುಲ್ಕ ನಿಗದಿಪಡಿಸ ಲಾಗಿದೆ. 500 ಪುಸ್ತಕ ಮಳಿಗೆ, 300 ವಾಣಿಜ್ಯ ಮಳಿಗೆ ಸ್ಥಾಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಸಮ್ಮೇಳನ ಬಗ್ಗೆ ಮುಕ್ತವಾಗಿ ಮಾಹಿತಿ ಪಡೆಯಲು ಇದೇ ಮೊದಲ ಬಾರಿಗೆ ಹೆಲ್ಪ್ಲೈನ್‌ (08472-277411) ಆರಂಭಿಸಲಾಗಿದ್ದು, ಬೆಳಗ್ಗೆ 10ರಿಂದ ಸಂಜೆ 7ಗಂಟೆವರೆಗೆ ತೆರೆದಿರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next