Advertisement

TV ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಈ ವ್ಯಕ್ತಿ ಈಗ ಪೋಲಿಸ್ ರ ಅತಿಥಿ

11:19 PM Nov 10, 2023 | Team Udayavani |

ಯಲ್ಲಾಪುರ: ತಾಲೂಕಿನ ಗುಳ್ಳಾಪುರದಲ್ಲಿ ಅಂಗಡಿಯ ಮೇಲ್ಛಾವಣಿ ತೆಗೆದು ಅಂಗಡಿಯೊಳಗೆ ಇಳಿದು ಹಣ ದೋಚಿದ ಘಟನೆಗೆ ಸಂಬಂದಿಸಿ‌ದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ.

Advertisement

ಬಂಧಿತ ವ್ಯಕ್ತಿ ಹಲವಳ್ಳಿಯ ಬಾಳೆಗದ್ದೆಯ ನಿವಾಸಿ ಭಾಸ್ಕರ ಸಿದ್ದಿಯಾಗಿದ್ದಾನೆ. ಈತ ಈ ಹಿಂದೆಯೂ ಕಳ್ಳತನದಲ್ಲಿ ಭಾಗಿಯಾಗಿದ್ದ.ನ 8 ರಂದು ಅಂಗಡಿಯೊಳಗೆ ಇಳಿದು ಈತ ಕ್ಯಾಶ್ ಕೌಂಟರ್ ನಲ್ಲಿದ್ದ 38 ಸಾವಿರ ನಗದು ಕದ್ದೋಯ್ದಿದ್ದಾನೆ.ಈಗ ಈತನಿಂದ 14,300 ರೂ ವಶಕ್ಕೆ ಪಡೆಯಲಾಗಿದೆ.

ಈ ವ್ಯಕ್ತಿ ಹಳ್ಳಿ ಹೈದ ಪ್ಯಾಟಿಗೆ ಬಂದ ರಿಯಾಲಿಟಿ ಶೋ ದಲ್ಲಿ ಪಾತ್ರ ನಿರ್ವಹಿಸಿದ್ದ.ಈಗ ಪೋಲಿಸ್ ಅತಿಥಿಯಾಗಿ ಕಂಬಿ ಸೇರುವ ಮೂಲಕ ಗಮನ ಸೆಳೆದಿದ್ದಾನೆ.

ಗುರುವಾರವಷ್ಟೇ ಕಳ್ಳತನದ ಬಗ್ಗೆ‌ ಮಾಲಿಕ ಜಿ.ಆರ್.ಭಟ್ಟ ದೂರು ದಾಖಲಿಸಿದ್ದರು.ಸಿಸಿ ಕ್ಯಾಮೇರಾದಲ್ಲಿ ದೃಶ್ಯಾವಳಿ ಸೆರೆ ಹಿಡಿದ ಪೋಲಿಸರು 24 ಗಂಟೆಯೊಳಗೆ ಹೆಡಮುರಿಕಟ್ಟಿದ್ದಾರೆ.

ಸಿಪಿಐ ರಂಗನಾಥ ನೀಲಮ್ಮನವರ್,ಪಿಎಸ್ಐ ನಿರಂಜನ ಹೆಗಡೆ ರವಿಗುಡ್ಡಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next