Advertisement

ಈ ಬಾರಿಯ ಚುನಾವಣೆ ಧರ್ಮಯುದ್ಧ: ಬಿಜೆಪಿ ಅಭ್ಯರ್ಥಿ ಡಾ| ಸಿ.ಎನ್‌.ಮಂಜುನಾಥ್‌

11:33 PM Mar 15, 2024 | Team Udayavani |

ರಾಮನಗರ: ಈ ಬಾರಿಯ ಲೋಕಸಭಾ ಚುನಾವಣೆ ಧರ್ಮ ಯುದ್ಧವಾಗಿದ್ದು, ಪ್ರಧಾನಿ ಮೋದಿಯವರ ನವಭಾರತ ನಿರ್ಮಾಣ ಸಂಕಲ್ಪಕ್ಕಾಗಿ ನಾವೆಲ್ಲರೂ ಕಟ್ಟಿಬದ್ಧರಾಗಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕ ‌ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಸಿ.ಎನ್‌.ಮಂಜುನಾಥ್‌ ಹೇಳಿದರು.

Advertisement

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಲೆ ಹಾಕುವ ಕೌಶಲವಿದ್ದವನಿಗೆ ಮಾತ್ರ ಮೀನು ಸಿಗುತ್ತದೆ. ಈಜು ಗೊತ್ತಿದ್ದರೆ ಸಾಗರದಲ್ಲಿ ಮುತ್ತು ಸಿಗುತ್ತದೆ. ಏನೂ ಗೊತ್ತಿಲ್ಲದಿದ್ದರೆ ಕೇವಲ ನೆಲ ಸಿಗುತ್ತದೆ. ಈ ಚುನಾವಣೆಯಲ್ಲಿ ನಾವು ಒಳ್ಳೆಯ ಈಜುಗಾರರಾಗಬೇಕು. ಆಗ ಮಾತ್ರ ನಮಗೆ ಗೆಲುವಿನ ಮುತ್ತು ಸಿಗುತ್ತದೆ ಎಂದರು.

ಸತ್ಯಕ್ಕೆ ಸಾಕ್ಷಿ ಕೇಳುವ ಕಾಲ ಬಂದಿದೆ
ಸುಳ್ಳು ಎಂಬುದು ಇತ್ತೀಚೆಗೆ ವೃತ್ತಿಯಾಗಿ ಬದಲಾಗಿದೆ. ಸತ್ಯಕ್ಕೆ ಸಾಕ್ಷಿ ಕೇಳುವ ಕಾಲ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಆರೋಗ್ಯಕರ ಸ್ಪರ್ಧೆ ನಡೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next