Advertisement

Bridge; ಜಾತ್ರಾ ಸಮಯದ್ದಲ್ಲಾದರೂ ತೀರ್ಥಹಳ್ಳಿ ತುಂಗಾ ಸೇತುವೆಗೆ ವಿದ್ಯುತ್ ಭಾಗ್ಯ ಸಿಗಲಿ

05:24 PM Jan 05, 2024 | Shreeram Nayak |

ತೀರ್ಥಹಳ್ಳಿ : ರಾಷ್ಟ್ರೀಯ ಹೆದ್ದಾರಿ 169 ರ ತೀರ್ಥಹಳ್ಳಿ -ಕೊಪ್ಪ ರಸ್ತೆಯ ತುಂಗಾ ನದಿಗೆ ಸರ್ ಎಂ ವಿಶ್ವೇಶ್ವರಯ್ಯನವರ ವಿಶೇಷ ತಂತ್ರಜ್ಞಾನದಿಂದ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶ್ರೀ ಜಯಚಾಮರಾಜೇಂದ್ರ ಸೇತುವೆಗೆ ಎರಡು ಬದಿಯಲ್ಲಿ ನಾಲ್ಕೈದು ತಿಂಗಳ ಹಿಂದೆ 10 ಕ್ಕೂ ಹೆಚ್ಚು ವಿದ್ಯುತ್ ಕಂಬ ನಿರ್ಮಿಸಿದ್ದು ನಾಲ್ಕು ಐದು ತಿಂಗಳು ಕಳೆದರು ಇಲ್ಲಿಯವರೆಗೆ ಆ ಕಂಬಗಳಿಗೆ ವಿದ್ಯುತ್ ಭಾಗ್ಯ ಒದಗಿ ಬಂದಿಲ್ಲ.

Advertisement

ಸೇತುವೆಯಲ್ಲಿ ಸಂಚರಿಸುವ ನೂರಾರು ವಾಹನಗಳಿಗೆ, ಅನೇಕ ಸಾರ್ವಜನಿಕರಿಗೆ ಇಂದಿನವರೆಗೂ ಕತ್ತಲೆ ಭಾಗ್ಯವೇ ಒದಗಿ ಬಂದಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನಿಸಿ ಈ ಜಾತ್ರಾ ಸಮಯದಲ್ಲಿ ಆದರೂ ಆ ವಿದ್ಯುತ್ ಕಂಬಗಳಿಗೆ ವಿದ್ಯುತ್ ಭಾಗ್ಯವನ್ನು ಕೊಟ್ಟು ಶತಮಾನದ ಸಮೀಪದಲ್ಲಿರುವ ತುಂಗಾ ಕಾಮನು ಸೇತುವೆಗೆ ವಿಶೇಷ ಮೆರಗು ನೀಡಲಿ ಎಂದು ಅನೇಕ ಪಟ್ಟಣದ ಸಾರ್ವಜನಿಕರು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next