Advertisement

Thirthahalli: ನಿಜವಾದ ಕಾರ್ಮಿಕ ಫಲಾನುಭವಿಗಳಿಗೆ ಇಲ್ವಾ ಕಿಟ್ !?

04:21 PM Sep 23, 2024 | Shreeram Nayak |

ತೀರ್ಥಹಳ್ಳಿ : ಕಾರ್ಮಿಕ ಇಲಾಖೆಯಿಂದ ಬಂದಂತಹ ಕಿಟ್ ಕಾರ್ಮಿಕ ಇಲಾಖೆ ಕಚೇರಿಯಲ್ಲೇ ಮೂಲೆಗೆ ಸೇರಿದೆ. ನಿಜವಾದ ಕಾರ್ಮಿಕ ಫಲಾನುಭವಿಗಳಿಗೆ ಕಿಟ್ ವಿತರಣೆ ಮಾಡುವುದನ್ನು ಬಿಟ್ಟು ಪ್ರತಿಯೊಂದರಲ್ಲೂ ರಾಜಕಾರಣವನ್ನು ತೀರ್ಥಹಳ್ಳಿಯಲ್ಲಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಬಡತನದಿಂದ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ಬಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಕ್ಕೆ ಸ್ಥಳೀಯ ರಾಜಕೀಯ ಪಕ್ಷದವರು ತಮ್ಮ ರಾಜಕಾರಣಕ್ಕಾಗಿ ಕಿಟ್ ವಿತರಣೆ ಮಾಡಲು ಬಿಡುತ್ತಿಲ್ವಾ? ಅಥವಾ ನಿಜವಾದ ಕಾರ್ಮಿಕ ಫಲಾನುಭವಿಗಳಿಗೆ ಕೊಡುವುದು ಬಿಟ್ಟು ಬೇರೆ ಇಷ್ಟ ಬಂದವರಿಗೆ ನೀಡುತ್ತಿದ್ದಾರಾ? ಹಣ ನೀಡಿದ ಕೆಲವರಿಗೆ ಕಿಟ್ ಕೊಡುತ್ತಾರೆ ಎಂಬ ಮಾತು ಸಹ ಕೆಲವು ಕಾರ್ಮಿಕರಿಂದ ಬಂದಿದೆ.

ಒಟ್ಟಿನಲ್ಲಿ ನಿಜವಾದ ಕಾರ್ಮಿಕ ಫಲಾನುಭವಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ದಿನ ನಿತ್ಯ ಕಾರ್ಮಿಕ ಇಲಾಖೆ ಕಚೇರಿಗೆ ಬಂದು ತಮ್ಮ ಮರು ನೋಂದಣಿಯಾದ ಕಾರ್ಡ್ ತೋರಿಸಿದರು ದೇವರು ಕೊಟ್ಟರು ಪೂಜಾರಿ ಕೊಡುವುದಿಲ್ಲ ಎಂಬಂತೆ ಯಾವುದೇ ಕಿಟ್ ವಿತರಿಸದೆ ಸರ್ಕಾರದ ಸೌಲಭ್ಯವನ್ನು ಮೂಲೆ ಗುಂಪು ಮಾಡಿ ಕಾರ್ಮಿಕರನ್ನು ಸತಾಯಿಸುತ್ತಿದ್ದಾರೆ ಎಂದು ನೊಂದ ಕಾರ್ಮಿಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next