Advertisement

Thirthahalli: ಅಕ್ರಮ ಗೋ ಸಾಗಾಟ; ಇಬ್ಬರ ಮೇಲೆ ಹಲ್ಲೆ

12:41 PM Mar 08, 2024 | Kavyashree |

ತೀರ್ಥಹಳ್ಳಿ: ಅಕ್ರಮ ಗೋ ಸಾಗಾಟ ಆರೋಪ ಹಿನ್ನೆಲೆ ಗ್ರಾಮಸ್ಥರಿಂದ ವಾಹನ ಚಾಲಕ ಸೇರಿ ಇಬ್ಬರ ಮೇಲೆ ಹಲ್ಲೆ ನಡೆದಿದ್ದು, ಓರ್ವನ ಸ್ಥಿತಿ ಗಂಭೀರವಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಗಲಾಟೆಯಲ್ಲಿ‌ ಹಲ್ಲೆಗೊಳಗಾದವರು ಉದಯ್ ಕುಮಾರ್ ಹಾಗೂ ರಾಹೀದ್ ಎಂದು ಗುರುತಿಸಲಾಗಿದೆ. ರಾಹೀದ್ ಎಂಬವರ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗ ಆಸ್ಪತ್ರೆ ಗೆ ರವಾನಿಸಲಾಗಿದೆ.

ಪಟ್ಟಣದ ಸಮೀಪದ ಕುರುವಳ್ಳಿ ಗ್ರಾಮದಲ್ಲಿ ಅಕ್ರಮ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಆರೋಪದ ಮೇರೆಗೆ ವಾಹನ ತಡೆದು ಗ್ರಾಮಸ್ಥರು ಗಲಾಟೆ ನಡೆಸಿದ್ದಾರೆ.‌

ಘಟನೆಗೆ ಸಂಬಂಧಿಸಿದಂತೆ ಹಲ್ಲೆ ಮಾಡಿದವರ  ಮೇಲೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next