Advertisement

Thirthahalli; ಭಾರೀ ಮಳೆ; ಕೆಲವೆಡೆ ಭೂ ಕುಸಿತ

08:47 AM Aug 03, 2024 | Kavyashree |

ತೀರ್ಥಹಳ್ಳಿ: ಭಾರೀ ಮಳೆಯಿಂಧಾಗಿ ತಾಲೂಕಿನ ಕೆಲವು ಕಡೆ  ಭೂ ಕುಸಿತ ಉಂಟಾದ ಘಟನೆಗಳು ಆ.3ರ ಶನಿವಾರ ವರದಿಯಾಗಿವೆ.

Advertisement

ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಕೂಡಿಗೆಯ ಬೆಕ್ಕನೂರು ಗ್ರಾಮದ ಮಂಜುನಾಥ್ ಎಂಬವರ ಮನೆ ಪಕ್ಕದಲ್ಲಿಯೇ ಗುಡ್ಡವೊಂದು ಕುಸಿದಿದೆ. ಗುಡ್ಡದ ಮಣ್ಣು ಮನೆಯ ಕೊಟ್ಟಿಗೆ ಸೇರಿದಂತೆ ಸುತ್ತಮುತ್ತ ಆವರಿಸಿದೆ.

ಮತ್ತೊಂದೆಡೆ, ಮೇಗರವಳ್ಳಿ ಸಮೀಪ ಉಡುಪಿ – ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ಧಾರಿ ಬದಿ ಭೂ ಕುಸಿತವಾಗಿದೆ. ಭಾರೀ ಪ್ರಮಾಣದ ಮಣ್ಣು ಕುಸಿದಿದ್ದು, ಸಂಬಂಧಿಸಿದ ಇಲಾಖೆಯವರು ಕುಸಿತವಾದ ಸ್ಥಳದಲ್ಲಿ ಕುಸಿತ ತಡೆ ನಿಟ್ಟಿನಲ್ಲಿ ತಾತ್ಕಾಲಿಕ ಪರಿಹಾರ ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ತಾಲೂಕಿನ ಸಾಲೂರು ಗ್ರಾ.ಪಂ. ವ್ಯಾಪ್ತಿಯ ಕುನ್ನಿಕೇವಿ ಸೇತುವೆಯು ಮಳೆಯಿಂದ ಅಪಾಯಕಾರಿ ಸ್ಥಿತಿಗೆ ತಲುಪಿದ್ದು, ಕುಸಿದು ಬೀಳುವ ಸಾಧ್ಯತೆಯಿದೆ.

ಬೆಜ್ವವಳ್ಳಿ ಸಮೀಪ ದಾನಸಲೆ ಗ್ರಾ.ಪಂ. ವ್ಯಾಪ್ತಿಯ ಬಸಾಪುರ ನಾಗೇಶ್ ಎಂಬವರ ತೋಟದ ಧರೆ ಕುಸಿದಿದ್ದು, ತೋಟದಲ್ಲಿ ಅಪಾರ ಪ್ರಮಾಣದ ಅಡಿಕೆ ಮರಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next